ಉತ್ತರ ಪ್ರದೇಶದ ಅಲಿಗಢ ಮೂಲದ ಕೆನಡಾದಲ್ಲಿ ವಾಸವಾಗಿರುವ ಉರ್ದು ಕವಿ ಹಾಗೂ ಸಾಹಿತಿ ತಾರೀಕ್ ಫಾರೂಕ್ (78) ಜಿಲ್ಲೆಯ ಬಸವ ಕಲ್ಯಾಣದಲ್ಲಿ ನಿಧನರಾಗಿದ್ದಾರೆ.

ಬಸವ ಕಲ್ಯಾಣ ನಗರದ ತೇರು ಮೈದಾನದಲ್ಲಿನ ಸಭಾ ಭವನದಲ್ಲಿ ಟೆಕ್ನೋಕ್ರಾಟ್ಸ್ ಹಾಗೂ ಸಾಹಿತ್ಯಾಭಿಮಾನಿಗಳ ಸಂಘದಿಂದ ಮುಷಾಯಿರಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗವಹಿಸಲು ಕವಿ ತಾರೀಕ್ ಫಾರೂಕ್ ಆಗಮಿಸಿದ್ದರು. ಮುಷಾಯಿರಾ ಹಾಗೂ ಕವಿಗೋಷ್ಠಿ ಕಾರ್ಯಕ್ರಮಕ್ಕೂ ಮುನ್ನ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು.
ಇದೇ ವೇಳೆ ತಾರೀಕ್ ಫಾರೂಕ್ರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಉತ್ತರಪ್ರದೇಶದ ಅಲಿಗಢ್ಗೆ ಪಾರ್ಥಿವ ಶರೀರವನ್ನ ರವಾನಿಸಿಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.



