ರಾಜ್ಯದಲ್ಲಿ ಪ್ರತಿನಿತ್ಯ ಸರಬರಾಜು ಆಗುತ್ತಿರುವ ಬಹುತೇಕ ಹಾಲು ಕಲಬೆರಕೆ ಎಂಬ ಆಘಾತಕಾರಿ ಮಾಹಿತಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ತಪಾಸಣೆಯಲ್ಲಿ ಬಹಿರಂಗವಾಗಿದೆ.
ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಹಾಲು ಕಲಬೆರಕೆ ಇರೋದು ದೃಢಪಟ್ಟಿತ್ತು. ಹೀಗಾಗಿ ಇಡೀ ರಾಜ್ಯದಾದ್ಯಂತ ಖಾಸಗಿ ಕಂಪನಿಗಳ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಎಪ್ರಿಲ್, ಮೇ, ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ನಲ್ಲಿ ಹಾಲು ಪರೀಕ್ಷೆ ಮಾಡಲಾಗಿ, ಈ ವೇಳೆ ವಿಷಕಾರಿ ಅಂಶ ಪತ್ತೆಯಾಗಿದೆ.
ರಾಜ್ಯದಲ್ಲಿ ನಡೆದ 44 ಹಾಲಿ ಬ್ರ್ಯಾಂಡ್ಗಳ 259 ಹಾಲಿನ ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ. ಹಾಲಿನ ಗುಣಮಟ್ಟದ ಪರೀಕ್ಷೆಯಿಂದ ಬೆಚ್ಚಿಬೀಳುವ ವಿಚಾರ ಬಹಿರಂಗ ಆಗಿದೆ. ಸೇವಿಸಲು ಯೋಗ್ಯವಲ್ಲದ ವಿಷಯುಕ್ತ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಎಫ್ಎಸ್ಎಸ್ಎಐ (ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ)ನ ಮಾನದಂಡಕ್ಕಿಂತ ಕಡಿಮೆ ಮಾನದಂಡದ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸರಬರಾಜು ಆಗುತ್ತಿರುವ ಹಾಲಿನಲ್ಲಿ ಶೇಕಡಾ 4.63 ರಷ್ಟು ಕಲಬೆರಕೆ ಇದ್ದರೆ, ಶೇಕಡಾ 42.47 ರಷ್ಟು ಹಾಲು ಎಫ್ಎಸ್ಎಸ್ಎಐ ಮಾನದಂಡಕ್ಕಿಂತ ಕಡಿಮೆ ಇದೆ ಎಂದು ವರದಿ ಹೇಳಿದೆ.
ಆದಿತ್ಯ, ಆರೋಗ್ಯ, ದೊಡ್ಲ, ಶ್ರೀಕೃಷ್ಣ ತಿರುಮಲ, ಕೃಷ್ಣಾ ಡೇರಿ ಸೇರಿದಂತೆ ಅನೇಕ ಮಾದರಿಯ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪರೀಕ್ಷೆ ವೇಳೆ ಹಾಲಿನಲ್ಲಿ ಆರೋಗ್ಯ ಹಾಳು ಮಾಡುವ ವಿಷಕಾರಿ ಅಂಶ ಪತ್ತೆಯಾಗಿದೆ. ಮಾಲ್ಟೊಡೆಕ್ಸ್ಟ್ರಿನ್ (maltodextrin), ಅಫ್ಲಾಟಾಕ್ಸಿನ್ (Aflatoxin) ಅಂಶಗಳು ಇರೋದು ಪತ್ತೆಯಾಗಿವೆ. ಹಾಲಿನ ಜೀವಿತಾವಧಿ ಹೆಚ್ಚಿಸಲು ಸೋಡಿಯಂ, ಸಕ್ಕರೆ, ಉಪ್ಪು ಬಳಕೆ ಮಾಡಲಾಗುತ್ತಿದೆ ಅನ್ನೋ ವಿಚಾರ ಬಯಲಾಗಿದೆ.
ಮಾಲ್ಟೊಡೆಕ್ಸ್ಟ್ರಿನ್: ಇದನ್ನು ಆಹಾರದಲ್ಲಿ ಬಳಸುತ್ತಾರೆ, ಆದರೆ ಹಾಲಿನಲ್ಲಿ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಹಾಲಿನ ಜೀವಿತಾವಧಿ ಹೆಚ್ಚಿಸಲು ಮಾಲ್ಟೊಡೆಕ್ಸ್ಟ್ರಿನ್ ಬಳಕೆ ಮಾಡಲಾಗುತ್ತದೆ. ಇದರ ಬಳಕೆಯಿಂದ ಅಲರ್ಜಿ, ಹೊಟ್ಟೆಯ ಸಮಸ್ಯೆಗಳು, ವಾಂತಿ, ಗ್ಯಾಸ್ಸ್ಟ್ರಿಕ್ ಆಗಲಿದೆ. ಮೇದೋಜೀರಕ ಗ್ರಂಥಿಯ ಮೇಲೆ ವ್ಯತಿರಿಕ್ತ ಪರಿಣಾಮ, ಮಧುಮೇಹ ಹೆಚ್ಚಾಗುವ ಸಾಧ್ಯತೆ ಇದೆ.
ಅಫ್ಲಾಟಾಕ್ಸಿನ್: ಪ್ರಾಣಿಗಳಿಗೆ ನೀಡುವ ಅಹಾರದಿಂದ ಹಾಲಿನಲ್ಲಿ ಬರಬಹುದು. ಅಫ್ಲಾಟಾಕ್ಸಿನ್ ಮನುಷ್ಯನ ದೇಹ ಸೇರಿದರೆ ವಾಕರಿಕೆ, ವಾಂತಿ, ಹೊಟ್ಟೆನೋವು, ಸ್ನಾಯು ಸೆಳೆತ, ಯಕೃತ್ತಿನಲ್ಲಿ ಹುಣ್ಣು, ಬೆಳವಣಿಗೆ ಕುಂಠಿತ, ಸಿರೋಸಿಸ್ ಅಲ್ಲದೇ ಕ್ಯಾನ್ಸರ್ ಸೇರಿದಂತೆ ವಿವಿಧ ರೋಗಗಳಿಗೆ ಅಹ್ವಾನ ನೀಡಬಲ್ಲದು. ಇನ್ನು ಉಪ್ಪು ಸಕ್ಕರೆ ಸೋಡಿಯಂ ಸೋಡಾದಿಂದ ಆಗುವ ಪರಿಣಾಮ ಎಲ್ಲರಿಗೂ ಗೊತ್ತಿರುವ ವಿಚಾರ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…