ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು

ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.

ಕಾವಳ ಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಕೋಡಿ ಮಾಂಗಜೆ ನಿವಾಸಿ ಜಾನ್ ವಾಸ್ (88) ಕಾಣೆಯಾಗಿದ್ದ ವ್ಯಕ್ತಿ.ಅವರನ್ನು ಗೋರೆಮಾರ್ ಗುಡ್ಡವೊಂದರಲ್ಲಿ ಪತ್ತೆ ಹಚ್ಚಿದ ಪೋಲೀಸರು ಬಳಿಕ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಡಿಕೆ ಮಾರಟ ಮಾಡುವ ಉದ್ದೇಶದಿಂದ ಪೇಟೆಗೆ ಬಂದ ಮಗನ‌ಜೊತೆಗೆ ಬಂದಿದ್ದ ವೃದ್ದ ಜಾನ್ ವಾಸ್ ಅವರು ಡಿ.6 ರಂದು ಬಿಸಿರೋಡಿನ ‌ಕೈಕಂಬ ಎಂಬಲ್ಲಿಂದ ಕಾಣೆಯಾಗಿದ್ದರು.
ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇವರ ಪತ್ತೆಗಾಗಿ ಮನೆಯವರು ಪೋಲಿಸರಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದರು.


ಇವರ ದೂರಿನಂತೆ ಬಂಟ್ವಾಳ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ನೇತ್ರತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಬಿಸಿರೋಡಿನ ಸುತ್ತಮುತ್ತಲು ಸ್ಚತಃ ಕಾರಿನ ಮೂಲಕ ನಿನ್ನೆಯಿಂದ ಹುಡುಕಾಟ ನಡೆಸಿ ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಣೆಯಾದ ಜಾನ್ ವಾಸ್ ಅವರ ಪತ್ತೆಗಾಗಿ ‌ಗುರುವಾರ ಸಂಜೆಯಿಂದ ಇವರು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಇಂದು ಸಂಜೆ ವೇಳೆ ಗೋರೆಮಾರ್ ಗುಡ್ಡವೊಂದರಲ್ಲಿ ಇವರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿ ಅವರನ್ನು ಕುಟುಂಬದ ಕೈಗೆ ಒಪ್ಪಿಸಿದ್ದಾರೆ.


ನಿನ್ನೆಯಿಂದ ಹೊಟ್ಟೆಗೆ ಊಟವಿಲ್ಲದೆ ಕೊಳಕು ಬಟ್ಟೆಯಲ್ಲಿದ್ದ ಜಾನ್ ವಾಸ್ ಅವರಿಗೆ ತಿನ್ನಲು ‌ಆಹಾರ ನೀಡಿ, ಬಟ್ಟೆಯನ್ನು ಬದಲಾವಣೆ ಮಾಡಿದ ಪೋಲೀಸರು ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಪತ್ತೆ ಹಚ್ಚಿದ ಕೂಡಲೇ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ರಾಜೇಶ್ ಮತ್ತು ಇರ್ಶಾದ್ ಅವರ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಬಂಟ್ವಾಳ: ಆಡಳಿತ ಸೌಧದ ಲಿಪ್ಟ್ ನಲ್ಲಿ 45 ನಿಮಿಷ ಸಿಲುಕಿದ ಸಾರ್ವಜನಿಕರು..!

ಬಂಟ್ವಾಳ: ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಮಳೆ ಹಬ್ಬವೆನ್ನುವ ಮಕ್ಕಳ ಕಲಿಕಾ ಚೈತನ್ಯ ಶಿಬಿರ ಆಯೋಜನೆ..!

ಉಡುಪಿ: ಪಾಜೆರೋ ಕಾರು ಪ*ಲ್ಟಿ ; ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರು….!

ಬ್ರಹ್ಮಾವರ: ತಲೆಯ ಮೇಲೆ ತೆಂಗಿನಕಾಯಿ ಬಿದ್ದು ಒಂದೂವರೆ ವರ್ಷದ ಮಗು ಸಾವು..!

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

error: Content is protected !!