ಜನ ಮನದ ನಾಡಿ ಮಿಡಿತ

Advertisement

ಮೂಡಬಿದ್ರೆಯಲ್ಲಿ ವಿಪ್ರ ಸಮಾಜದ ವತಿಯಿಂದ “ಗಾಯತ್ರಿ ಜಪಯಜ್ಞ” ಹಾಗೂ “ಗಾಯತ್ರಿ ಮಹತ್ವ ” ಪ್ರವಚನ ಕಾರ್ಯಕ್ರಮ

ದಕ್ಷಿಣ ಕನ್ನಡ: ಬ್ರಾಹ್ಮಣ ಸಂಸ್ಕಾರ, ಸಂಘಟನೆ, ಮತ್ತು ಕ್ಷೇಮಾಭಿವೃದ್ಧಿಗಾಗಿ ಗಾಯತ್ರಿ ಜಪ ಯಜ್ಞ ಸಮಿತಿ ಸಹಕಾರದಿಂದ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ಮೂಡಬಿದರೆ ಇಲ್ಲಿ ಮೂಡಬಿದ್ರೆ ವಲಯ ಬ್ರಾಹ್ಮಣ ಸಮಾಜ ಒಂದುಗೂಡಿ “ಗಾಯತ್ರಿ ಜಪಯಜ್ಞ” ಕಾರ್ಯಕ್ರಮ ವಿದ್ಯುಕ್ತವಾಗಿ ನಡೆಯಿತು.


ರವಿವಾರ ಬೆಳಗ್ಗೆ ಪ್ರಾರ್ಥನೆಯ ಸಂಕಲ್ಪ, ಕಲಶಸ್ಥಾಪನೆ, ಗಣಪತಿ ಹೋಮದ ಮುಖಾಂತರ ಆರಂಭಗೊಂಡ ಜಪಯಜ್ಞ, ಅಗ್ನಿ ಪ್ರತಿಷ್ಠೆ ನಂತರ ಬೇರೆ ಬೇರೆ ಯಜ್ಞ ಕುಂಡಗಳಲ್ಲಿ ವಿಧಿವತ್ತಾಗಿ ನಡೆಸಿ ನಂತರ ಪೂರ್ಣಾಹುತಿ ಜರುಗಿತು.
ಅಡಿಗಳು ಅನಂತ ಕೃಷ್ಣ ಭಟ್, ವಾಗೀಶ ಶಾಸ್ತ್ರಿ, ಸುಬ್ರಮಣ್ಯ ಭಟ್, ಪ್ರಭಾಕರ ಭಟ್, ಶಿವಪ್ರಸಾದ ಭಟ್, ಶ್ರೀನಿಧಿ ಅಬ್ಯಂಕರ್ ಇವರು ವಿಧಿವತ್ತಾಗಿ ಗಾಯತ್ರಿ ಜಪಯಜ್ಞ ನಡೆಸಿಕೊಟ್ಟರು
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗಾಯತ್ರಿ ಪಠಣದ ಮಹತ್ವವನ್ನು ಸೇರಿದ ಸಭಿಕರಿಗೆ ಮತ್ತು ಸಮಾಜ ಬಾಂಧವರಿಗೆ ವಿವರಿಸಲಾಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಪತಿ ಭಟ್ ವಹಿಸಿದ್ದರು, ಸಭಾ ಕಾರ್ಯಕ್ರಮದ ನಿರೂಪಣೆ ದೇವಾನಂದ ಭಟ್, ಚಂದ್ರಶೇಖರ ರಾವ್ ಇವರು ಧನ್ಯವಾಧ ನೀಡಿದರು.
ನಂತರದಲ್ಲಿ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ವಿತರಿಸಲಾಯಿತು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!