ಮುಲ್ಕಿ : ಶ್ರೀ ವೀರಭದ್ರ ಮಹಮ್ಮಾಯಿ ವಾಚನಾಲಯ ಮತ್ತು ಯುವಕಮಂಡಲ ಹಾಗೂ ಮಹಿಳಾ ವೇದಿಕೆ ಕಲ್ಲಾಪು, ಹಳೆಯಂಗಡಿ ವತಿಯಿಂದ ವಾರ್ಷಿಕ ಭಜನಾ ಮಂಗಳೋತ್ಸವು ಜರಗಿತ್ತು, ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಭಟ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಶ್ರೀ ಮಹಮ್ಮಾಯಿ ದೇವರ ಅರ್ಚಕರಾದ ಆರ್.ಎನ್ ಶೆಟ್ಟಿಗಾರ್ , ರತ್ನಾಕರ್ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರರು,ಯುವಕ ಮಂಡಲದ ಅಧ್ಯಕ್ಷರಾದ ನವೀನ್ ಶೆಟ್ಟಿಗಾರ್, ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಭಾರತಿ, ಕಾರ್ಯದರ್ಶಿಯಾದ ಪುಷ್ಪಲತಾ, ಭಜನಾ ಸಂಚಾಲಕರಾದ ವೇಗನಾಥ್, ನಾರಾಯಣ ಶೆಟ್ಟಿಗಾರ್ ಸಾಗು, ಯೋಗೀಶ್ ಸಾಗು ,ಯಶೋಧರ ಸಾಗು, ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಲೋಲಾದರ್ ಶೆಟ್ಟಿಗಾರ್, ವಾಚನಾಲಯದ ಸದಸ್ಯರು, ಮಹಿಳಾ ವೇದಿಕೆ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು



