ಜನ ಮನದ ನಾಡಿ ಮಿಡಿತ

Advertisement

ಮಂಗಳೂರು ತ್ಯಾಜ್ಯ ದುರಂತ ಸಂತ್ರಸ್ತರಿಗಿಲ್ಲ ಇನ್ನೂ… ಪೂರ್ಣ ಪರಿಹಾರ, ಕೇವಲ ಮಾತಿನಿಂದಲೇ ಉಪಚಾರ, ಸಂತ್ರಸ್ತರಲ್ಲಿಲ್ಲ ಏಕತೆ, ಪರಿಹಾರಕ್ಕಿದೆ ನ್ಯೂನತೆ,

ದಕ್ಷಿಣ ಕನ್ನಡ : ಮಂಗಳೂರಿನ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣಾ ಘಟಕ ಪಚ್ಛನಾಡಿಯಲ್ಲಿ ತ್ಯಾಜ್ಯ ದುರಂತ ಸಂಭವಿಸಿ, ಮಂದಾರ ಎಂಬ ಕೃಷಿ ಪ್ರಧಾನ ಪ್ರದೇಶ, ಹಚ್ಚ ಹಸಿರಿನ ಸುಂದರ ತಾಣ, ಸಂಪೂರ್ಣ ನಾಶವಾಗಿ ಮಂದಾರ ಜನತೆಯ ಬದುಕನ್ನು ನಾಶ ಮಾಡಿ ಜನರ ನೆಮ್ಮದಿಯ ಬದುಕನ್ನ ಕಿತ್ತುಕೊಂಡ ತ್ಯಾಜ್ಯ ದುರಂತ ಸಂಭವಿಸಿ ಸುಮಾರು 5 ವರ್ಷಗಳು ಸಮೀಪಿಸುತ್ತಿವೆ, ಆದರೆ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಮರೀಚಿಕೆಯಾಗಿ ಉಳಿದಿದೆ.

ತ್ಯಾಜ್ಯ ದುರಂತದ ಸಂತ್ರಸ್ತರು ಪೂರ್ಣಪ್ರಮಾಣದ ಪರಿಹಾರಕ್ಕಾಗಿ ಅಲೆದು ಅಲೆದು ಸುಸ್ತಾಗಿದ್ದಾರೆ ವಿನಹ, ಯಾವುದೇ ಪ್ರಯೋಜನವಾಗಿಲ್ಲ, ಮಾನಸಿಕವಾಗಿ ನೊಂದ ಹಲವು ಸಂತ್ರಸ್ತರು ಈಗಾಗಲೇ ಮರಣ ಹೊಂದಿದ್ದಾರೆ, ಹಲವರು ಅನಾರೋಗ್ಯ ಪೀಡಿತರಾಗಿದ್ದಾರೆ, ಹಲವರು ಮಧ್ಯಂತರ ಪರಿಹಾರ ಪಡಕೊಂಡು, ಊರು ಬಿಟ್ಟು ಬೇರೆಡೆ ವಾಸವಾಗಿದ್ದಾರೆ ಆದರೆ ಸಂತ್ರಸ್ತರು ನೆಮ್ಮದಿಯಾಗಿಲ್ಲ ಎನ್ನುವುದು ವಾಸ್ತವ ಸತ್ಯ, ಕೆಲವೇ ಕೆಲವು ಮಂದಿ ಸಂಬಂಧ ಪಟ್ಟವರು ಸಂತ್ರಸ್ತ ನಿಲಯದಲ್ಲಿ ವಾಸವಾಗಿದ್ದಾರೆ, ಅಲ್ಲೂ ಮೂಲಭೂತ ಸೌಕರ್ಯಗಳಿಲ್ಲ ಎಂದು ವರದಿಯಾಗಿದೆ, ಯಾರನ್ನು ಹೇಳಿಯೂ ಪ್ರಯೋಜನವಿಲ್ಲ ಎನ್ನುತ್ತಾರೆ ಸಂತ್ರಸ್ತರು.

ಈ ಮಧ್ಯೆ ಸಂತ್ರಸ್ತರಲ್ಲಿ ಹಲವು ಮಂದಿ ನಮಗೆ ಪರಿಹಾರ ಬೇಕಾಗಿಲ್ಲ ನಮಗೆ ನಮ್ಮ ಜಾಗ ಮೊದಲಿನಂತೆ ಮಾಡಿ ನಮಗೆ ಹಿಂತಿರುಗಿಸಿ ಎಂದು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ ಎಂದು ಸಂತ್ರಸ್ತ ಮೂಲಗಳಿಂದ ಮಾಹಿತಿ ಇದೆ, ಹಲವು ಮಂದಿ ನಮಗೆ ಪೂರ್ಣ ಪರಿಹಾರ ಬೇಗ ಕೊಡಿ ಎನ್ನುತ್ತಿದ್ದಾರೆ, ಈ ಮಧ್ಯೆ ಅಧಿಕಾರಿಗಳು ಗೊಂದಲಕ್ಕೀಡಾದಂತೆ ತೋರುತ್ತಿದ್ದು ಇದುವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಂತೆ ತೋರುತ್ತಿಲ್ಲ, ಸುಮಾರು ಮೂರು ವರ್ಷಗಳ ಹಿಂದೆ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿ ಮಾಧ್ಯಮ ಪ್ರಕಟಣೆಯನ್ನು ಇಲಾಖೆ ನೀಡಿತು, ನಂತರದಲ್ಲಿ ಯಾವುದೇ ಬೆಳವಣಿಗೆ ಕಂಡಿಲ್ಲ, ಪ್ರಸ್ತುತ ಪ್ರಕಟಣೆ ಅವಧಿ ಮೀರಿದ್ದು, ಯಾವುದೇ ಪ್ರಕ್ರಿಯೆ ಮುಂದುವರಿಯದ ಕಾರಣ ಈಗ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದ ಪ್ರಕಟಣೆಗೆ ಯಾವುದೇ ಮಾನ್ಯತೆ ಇಲ್ಲ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ .

ಈ ಮಧ್ಯೆ ಹಲವು ಸಂತ್ರಸ್ತರು ಪೂರ್ಣ ಪ್ರಮಾಣದ ಪರಿಹಾರ ಸಿಗದಿರುವುದರಿಂದ ಬೇಸತ್ತು, ನಮಗೆ ಪರಿಹಾರದ ಅಗತ್ಯವಿಲ್ಲ ನಮಗೆ ನಮ್ಮ ಭೂಮಿ ವಾಪಸು ನೀಡಿ ಎನ್ನುತ್ತಿದ್ದಾರೆ, ಇನ್ನು ಹಲವರು ನಮಗೆ ಪೂರ್ಣ ಪ್ರಮಾಣದ ಪರಿಹಾರ ಬೇಗ ಕೊಡಿ ಎನ್ನುತ್ತಿದ್ದಾರೆ, ಹಲವರು ಇನ್ನು ಹಲವು ಸಂತ್ರಸ್ತರು ಅಂದು ನೀಡಿದ ಮೌಕಿಕ ಭರವಸೆಯಂತೆ ಈಗ ವಾಸಿಸುತ್ತಿರುವ ವಸತಿ ಸಂಕೀರ್ಣ ಉಚಿತವಾಗಿ ನೀಡಿ ಎನ್ನುತ್ತಿದ್ದಾರೆ, ನಮ್ಮ ಧಾರ್ಮಿಕ ನಂಬಿಕೆಗಳು ತ್ಯಾಜ್ಯ ದುರಂತದಲ್ಲಿ ನಾಶವಾಗಿದ್ದು ಮರು ಸ್ಥಾಪಿಸಿ ಎಂದು ದಂಬಾಲು ಬಿದ್ದಿದ್ದಾರೆ, ಹಲವು ಸಂತ್ರಸ್ತರು ಯಾವುದೇ ಗೊಂದಲಕ್ಕೆ ಅವಕಾಶ ಕೊಡದೆ ಮೌನವಾಗಿದ್ದಾರೆ, ಹಲವು ಸಂತ್ರಸ್ತರು ಅನಾರೋಗ್ಯ ಪೀಡಿತರಾಗಿದ್ದಾರೆ, ಒಟ್ಟಾರೆಯಾಗಿ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತರ ಸಮಸ್ಯೆ ಸದ್ಯಕ್ಕೆ ಬಗೆ ಹರಿಯುವಂತೆ ತೋರುತ್ತಿಲ್ಲ ಸಂತ್ರಸ್ತರಲ್ಲಿ ಒಗ್ಗಟ್ಟಿನ ಕೊರತೆ ಹಾಗೂ ಪರಸ್ಪರ ಅಪನಂಬಿಕೆ ಇದ್ದಂತೆ ತೋರುತ್ತಿದ್ದು, ಅಲ್ಲದೆ ದಿನ ಕಳೆದಂತೆ ಒಬ್ಬೊಬ್ಬರು ಒಂದೊಂದು ರೀತಿಯ ಬೇಡಿಕೆ ಇಡುತ್ತಿರುವುದು ಸಮಸ್ಯೆ ಹೆಚ್ಚಿಸಲು ಇನ್ನೊಂದು ಕಾರಣ ಎನ್ನಲಾಗಿದ್ದು, ಈ ಮಧ್ಯೆ ಹಲವರು ನಾವು ಕೂಡ ಸಂತ್ರಸ್ತರು ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎನ್ನುವ ಮಾಹಿತಿ ಇದ್ದು ಈ ಬಗ್ಗೆ ಗಮನಹರಿಸಬೇಕಿದೆ .

ಒಟ್ಟಾರೆಯಾಗಿ ಮಂದಾರ ತ್ಯಾಜ್ಯ ದುರಂತ ಸಂತ್ರಸ್ತರಿಗೆ ನೆಮ್ಮದಿ ದೊರೆಯಲಿ, ಜೀವನ ಮೊದಲಿನಂತಾಗಲಿ, ಎನ್ನುವುದು ನಮ್ಮ ಆಶಯ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!