ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: ಕೆಪಿಎಸ್‌ಕೆ ಶಾಲೆಯಲ್ಲಿ ಗಮನ ಸೆಳೆದ ಬೇಸಿಗೆ ಶಿಬಿರ

ಮುಲ್ಕಿ: ಗ್ರಾಮೀಣ ಪ್ರದೇಶದ ಅತಿಕಾರಿಬೆಟ್ಟು ವಿನ ಪಂಜಿನಡ್ಕ ಕೆಪಿಎಸ್‌ಕೆ ಸ್ಮಾರಕ ಅನುದಾನಿತ ಪ್ರೌಢಶಾಲೆಯು ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಅಧ್ಯಾಪಕರ ತಂಡ ಅತ್ಯಂತ ಕ್ರೀಯಾಶೀಲವಾಗಿದ್ದು ಶಾಲೆಯಲ್ಲಿ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿ ಗ್ರಾಮೀಣ ಪ್ರದೇಶದಲ್ಲಿ ಒಂದು ಮಾದರಿ ಶಾಲೆಯಾಗಿ ಹೆಸರು ಗಳಿಸಿದೆ, ಸುಮಾರು ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲದೆ ಬೇರೆ ಶಾಲೆಯ ವಿದ್ಯಾರ್ಥಿಗಳ ಹಾಗೂ ಮುಂಬೈ ವಿದ್ಯಾರ್ಥಿಗಳು ಸೇರಿ 45 ವಿದ್ಯಾರ್ಥಿಗಳು ಬಾಗವಹಿಸಿದ್ದರು.


ಶಾಲೆಯಲ್ಲಿ ಮುಖ್ಯ ಕಲಾ ಶಿಕ್ಷಕರಾಗಿರುವ ವೆಂಕಿ ಫಲಿಮಾರ್ ರವರು ಶಿಬಿರದಲ್ಲಿ ಮುಖ್ಯವಾಗಿ ಮಕ್ಕಳಿಗೆ ಪೇಪರ್ ಕ್ರಾಪ್ಟ್, ಅವೆ ಮಣ್ಣಿನ ಕಲಾಕೃತಿ ರಚಿಸುವ ಬಗ್ಗೆ ಮಾಹಿತಿ ನೀಡಿದ್ದು ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಶ್ಲೋಕ, ಭಾರತೀಯ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗಿದೆ.
ಕಲಾಕೃತಿಗಳಲ್ಲಿ ಮುಖ್ಯವಾಗಿ ಹಳೆಯ ಬಾಟಲ್ ವಿವಿಧ ಬಣ್ಣಗಳಿಂದ, ಹೂವಿನ ಚಿತ್ರಗಳಿಂದ ಆಕರ್ಷಿಣೀಯವಾದರೆ, ಹಾಳಾದ ತೆಂಗಿನ ಕಾಯಿ ಮತ್ತು ಗೆರಟೆ ಒಂದು ಮನುಷ್ಯನನ್ನು ಹೋಲುವ ರೂಪ ಪಡೆದಿದೆ, ಹಳೆಯ ಪೇಪರ್ ಬುಲೆಟ್ ನ ಪ್ರತಿಕೃತಿ ಹೊಂದಿದರೆ, ಹಳೆಯ ರಟ್ಟು ರಕ್ಕಸನ ರೂಪ ಪಡೆದಿದೆ, ಸ್ಪಂಜ್ ವಿವಿಧ ಗೊಂಬೆಯ ರೂಪ ಪಡೆದು ಆಕರ್ಷಣೀಯ ಅಲ್ಲದೆ ಮಕ್ಕಳಿಗೆ ಶ್ಲೋಕ ಪಾಠ, ಪ್ರಾಣಯಾಮ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.
ಸರಕಾರಿ ಶಾಲೆಗಳೂ ಮುಚ್ಚುತ್ತಾ ಬಂದರೂ ಈ ಅನುದಾನಿತ ಶಾಲೆಯನ್ನು ಶಾಲಾ ಆಡಳಿತ ಮಂಡಳಿ ಹಳೆ ವಿಧ್ಯಾರ್ಥಿ ಸಂಘ ಶಾಲಾ ಶಿಕ್ಷಕರ ಹಾಗೂ ದಾನಿಗಳ ಸಹಕಾರದಿಂದ ಬೇಕು ಬೇಕಾದ ಸವಲತ್ತುಗಳನ್ನು ಉಚಿತವಾಗಿ ನೀಡಿ ಮಾದರಿಯನ್ನಾಗಿ ರೂಪಿಸಿ, ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದಾರೆ

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!