ಜನ ಮನದ ನಾಡಿ ಮಿಡಿತ

Advertisement

ನನ್ನ ತಂದೆಯೇ ನನ್ನ ನೆಚ್ಚಿನ ಗುರು

ಪ್ರಥಮಥ  ಗುರುವಿಗೆ  ವಂದಿಸುತ್ತ ನನ್ನ ನೆಚ್ಚಿನ ಶಿಕ್ಷಕರ ಬಗ್ಗೆ ಒಂದೆರಡು ಅನಿಸಿಕೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. 

“ಮನೆಯೇ ಮೊದಲ ಪಾಠಶಾಲೆ ಜನನಿ ತಾನೇ ಮೊದಲ ಗುರು” ಎಂಬ  ನಾಣ್ನುಡಿಯಂತೆ  ನನಗೆ ಮನೆಯೇ ಮೊದಲ ಪಾಠಶಾಲೆಯಾಗಿದೆ .ಅಂತೆಯೇ ನನ್ನ ನೆಚ್ಚಿನ ಶಿಕ್ಷಕ ನನ್ನ ತಂದೆಯೇ ಆಗಿದ್ದಾರೆ. ಸಣ್ಣ ವಯಸ್ಸಿನಿಂದಲೂ ತಂದೆಯ ಶಿಸ್ತು ,ಸಂಯಮ, ಸಮಯ ಪಾಲನೆ ಮುಂತಾದ ಗುಣಗಳು ನನ್ನ ಮೇಲೆ ಪ್ರಭಾವ ಬೀರಿದೆ. ಅವರು ಶಾಲೆಯಲ್ಲಿ ನನ್ನ ಶಿಕ್ಷಕರು ಕೂಡ ಹೌದು. ನನ್ನ  ಶಾಲೆಯ ಹೆಸರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆ ,ನಾಗೂರು  ನನ್ನ ತಂದೆ ಇಲ್ಲಿ  ಕನ್ನಡ  ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನಲ್ಲಿ ಸಣ್ಣ ವಯಸ್ಸಿನಿಂದಲೇ ಕನ್ನಡಾಭಿಮಾನವನ್ನು ಮೂಡಿಸಿದವರು ನನ್ನ ತಂದೆಯೇ ಆಗಿದ್ದಾರೆ.  ನಾನು ಮೂರು ವರ್ಷದವಳಿರುವಾಗಲೇ ಕನ್ನಡವನ್ನು  ಓದುವುದರ ಜೊತೆಗೆ ಸ್ಪಷ್ಟವಾಗಿ  ಬರೆಯುತ್ತಿದ್ದೆ. ಎಲ್ಲರೂ ಇದಕ್ಕೆ ಅಚ್ಚರಿಪಡುತ್ತಿದ್ದರು. ಇದಕ್ಕೆ ಕಾರಣ ನಾನು ದಿನವೂ ನನ್ನ ತಂದೆ ಮನೆಯಲ್ಲಿ.     ಪಾಠಕ್ಕೆ  ಅಣಿ ಯಾಗುವುದನ್ನು ನೋಡುತ್ತಿದ್ದೆ. ನನ್ನ ತಂದೆ ಉತ್ತಮ ಕಲಾವಿದರು ಹೌದು. ಅವರಿಂದ ನಾನು ನಾಟಕ ಅಭಿನಯ, ಕಾವ್ಯವಾಚನ ಮುಂತಾದ ಕಲೆಗಳನ್ನು ಕೂಡ ಕಲಿತಿದ್ದೇನೆ . “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ದಾಸವಾಣಿಯಂತೆ ಗುರುವಿಗೆ, ಗುರುವಿನ  ಸ್ಥಾನದಲ್ಲಿರುವರಿಗೆ ನಾವು ಗೌರವವನ್ನು ನೀಡಬೇಕು. ನನ್ನ ತಂದೆ ಇವೆಲ್ಲ ಗುಣಗಳನ್ನು ನನಗೆ ಕಲಿಸಿ ಕೊಟ್ಟಿದ್ದಾರೆ. ನನ್ನ ತಂದೆಯಾಗಿ, ಗುರು ಆಗಿ  ನನಗೆ ಸರಿ ದಾರಿಯಲ್ಲಿ ನಡೆಯಲು ಪ್ರೇರಣೆ ನೀಡಿದ್ದಾರೆ.

 

ಶ್ರೇಯಾ. ಆರ್ ನಾಯ್ಕ

10ನೇ ತರಗತಿ ಸಂದೀಪನ ಆಂಗ್ಲ ಮಾಧ್ಯಮ ಶಾಲೆ,ನಾಗೂರು
ಉಡುಪಿ ಜಿಲ್ಲೆ

 

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!