ಮಂಗಳೂರು: ಮಾದಕ ವಸ್ತುಗಳನ್ನು ಮಾರಾಟ ಮಾಡುತಿದ್ದ ಇಬ್ಬರನ್ನು ಮಂಗಳೂರಿನ ಪೊಲೀಸರು ಬಂದಿಸಿದ್ಧಾರೆ.
ಮಾದಕ ವಸ್ತು ಎಂಬಿಎಂಎಯನ್ನು ಮಾರಾಟ ಮಾಡಲು ಯತ್ನಿಸುತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರಿನ ನಗರ ಹೊರವಲಯದ ಪಡು ಶೆಡ್ಡೆ ಗ್ರಾಮದ ಮೂಡು ಶೆಡ್ಡೆ ಬಳಿ ನಡೆದಿದೆ. ಆರೋಪಿತರನ್ನು ಶಾರುಕ್ (27) ಮತ್ತು ಜಗದೀಶ್ (45) ಎಂದು ಗುರುತಿಸಲಾಗಿದೆ. ಆರೋಪಿತರಿಂದ 4.5 ಗ್ರಾಂ ಎಂಬಿಎಂಎ, ಮೂರು ಮಾರಕ ಆಯುಧಗಳು,ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಲಾಗಿದೆ. ಇದರ ಮೌಲ್ಯ 4,41,700 ಎಂದು ಅಂದಾಜಿಸಲಾಗಿದೆ. ಇವರು ಮೂಡು ಶೆಡ್ಡಿಗೆ ಹೋಗುವ ದಾರಿಯಲ್ಲಿ ನಿಂತು ಎಂಡಿಎಂಎಯನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಕಾವೂರು ಠಾಣೆಯ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಪರಿಶೀಲಿಸಿದಾಗ ಕಾರಿನಲ್ಲಿ ಮಾರಕಾಯುಧಗಳು ಕಂಡುಬಂದಿವೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



