ದಕ್ಷಿಣ ಕನ್ನಡ : ಕರಾಡ ಬ್ರಾಹ್ಮಣ ಸುಧಾರಕ ಸಂಘ ಶ್ರೀನಿವಾಸಪುರ ಗುಂಡ್ಯಡ್ಕ ಮೂಡಬಿದಿರೆ ಇದರ ವತಿಯಿಂದ ಶೃಂಗೇರಿ ದರ್ಶನ ಹಾಗೂ ಗುರುಗಳ ಭೇಟಿ ಮತ್ತು ಮಂತ್ರಾಕ್ಷತೆ ಸ್ವೀಕಾರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವರ್ಷಂ ಪ್ರತಿಯಂತೆ ಶೃಂಗೇರಿ ಜಗದ್ಗುರುಗಳ ಚಾತುರ್ಮಾಸ ಸಂದರ್ಭದಲ್ಲಿ ಕರಾಡ ಸಮಾಜದ ವತಿಯಿಂದ ಸಮಾಜ ಬಾಂಧವರಿಗಾಗಿ ಶೃಂಗೇರಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ ಸಮಾಜ ಬಾಂಧವರಿಗಾಗಿ ಏರ್ಪಡಿಸಲಾಗಿದ್ದ ಶೃಂಗೇರಿ ಪ್ರವಾಸದಲ್ಲಿ ಮಂಗಳೂರು, ಮೂಡಬಿದರೆ,ಉಡುಪಿ,ಮಣಿಪಾಲ, ಹಾಗೂ ಇತರರಡೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭಾಗವಹಿಸಿದ್ದು, ದೇವರ ದರ್ಶನವನ್ನು ಪಡೆದು ಜಗದ್ಗುರು ಭಾರತಿ ತೀರ್ಥ ಶ್ರೀಪಾದಂಗಳವರ ಶುಭಾಶೀರ್ವಾದದೊಂದಿಗೆ, ಜಗದ್ಗುರು ವಿದುಶೇಖರ ಭಾರತಿ ಮಹಾಸ್ವಾಮಿಗಳಿಂದ ಮಂತ್ರಾಕ್ಷತೆ ಪಡೆದು ಭಕ್ತರು ಪುನೀತರಾದರು,
ಇದೇ ಸಂದರ್ಭದಲ್ಲಿ ಕರಾಡ ಸಮಾಜ ಸುಧಾರಕ ಸಂಘ ಗುಂಡ್ಯಕ್ಕದ ವತಿಯಿಂದ ಗುರುಗಳ ಪಾದ ಪೂಜೆ ಹಾಗೂ ಗುರು ಕಾಣಿಕೆ ಸಮರ್ಪಿಸಲಾಯಿತು ಅಂತೆಯೇ ಯಾತರಾರ್ಥಿಗಳಿಗೂ ಪಾದ ಪೂಜೆಗೆ ಅವಕಾಶ ನೀಡಲಾಗಿತ್ತು, ಗುರುಗಳಿಂದ ಫಲಮಂತರಾಕ್ಷತೆ ಹಾಗೂ ಶಾರದೆಯ ಪ್ರಸಾದ ರೂಪದ ಪುಸ್ತಕವನ್ನು ಭಕ್ತರಿಗೆ ನೀಡಿ ಸಮಾಜ ಬಾಂಧವರನ್ನ ಆಶೀರ್ವದಿಸಿದರು.



