ತ್ರಿಶೂರ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕಾಡಾನೆ ದಾಳಿಗೆ 20 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುತುವನ್ ಸಮುದಾಯದ ಸೆಬಾಸ್ಟಿಯನ್ ಮೃತ ಯುವಕ. ಮಲಕ್ಕಪ್ಪರ ಪೊಲೀಸ್ ಠಾಣೆ ವ್ಯಾಪ್ತಿಯ ಬುಡಕಟ್ಟು ಹಳ್ಳಿಯೊಂದರಲ್ಲಿ ಭಾನುವಾರ ರಾತ್ರಿ ಮೂವರು ವ್ಯಕ್ತಿಗಳು ಜೇನುತುಪ್ಪ ಸಂಗ್ರಹಿಸಲು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಕತ್ತಲೆಯಲ್ಲಿ ಕಾಡಾನೆಯನ್ನು ನೋಡಿದ ಮೂವರು ಓಡಲು ಶುರು ಮಾಡಿದ್ದಾರೆ. ಓಡುವ ಭರದಲ್ಲಿ ಸೆಬಾಸ್ಟಿಯನ್ ಕೆಳಗೆ ಬಿದಿದ್ದಾರೆ. ಬಳಿಕ ಆನೆ ಅವರನ್ನು ತುಳಿದು ಕೊಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಚಾಲಕುಡಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.



