ಆಟೋ ರಿಕ್ಷಾ ಚಾಲಕ ಬನ್ನೂರು ದಿ.ಬಿ ನಾರಾಯಣ ಆಚಾರ್ಯ ಅವರ ಪುತ್ರ ವಿನೋದ್ (37ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಏ.28ರಂದು ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಬನ್ನೂರು ಪರಿಸರದಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಅವರು ಇತರ ವಾಹನದಲ್ಲೂ ಬದಲಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ ಚಂದ್ರವತಿ, ತಾಯಿ ಹೇಮಾವತಿ, ಸಹೋದರ ವಿಶಾಲ್ ಅವರನ್ನು ಅಗಲಿದ್ದಾರೆ.



