ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಕರಾವಳಿಯಲ್ಲಿ ಮೀನಿಗೆ ಬರ; ಗಗನಕ್ಕೇರಿದ ಮೀನಿನ ದರ

ಉಡುಪಿ: ಬೇಸಗೆಯ ತಾಪ ಎಲ್ಲೆಡೆ ಪರಿಣಾಮ ಬೀರುತ್ತಿದ್ದು, ಮೀನುಗಾರಿಕಾ ವಲಯಕ್ಕೂ ಬಿಸಿ ತಟ್ಟಿದೆ. ಬಿಸಿಲಿನ ಬೇಗೆಗೆ ತೀರದತ್ತ ಮೀನುಗಳು ಬಾರದೇ ಇರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಇದರಿಂದ ಬಹುಬೇಡಿಕೆಯ ಮೀನುಗಳ ದರ ದುಬಾರಿಯಾಗಿದೆ.

ಕರಾವಳಿಯಲ್ಲಿಯೇ ಎರಡು- ಮೂರು ದಿನಗಳ ಹಿಂದೆ ಅಂಜಲ್ ಕೆಜಿಗೆ ಬರೋಬ್ಬರಿ 1,800 ರೂ.ಗೆ ತಲುಪಿತ್ತು. ಇದುವರೆಗಿನ ಗರಿಷ್ಠ ಬೆಲೆಯಿದು. ಸದ್ಯ ಮಾರುಕಟ್ಟೆಯಲ್ಲಿ 1,400-1,500 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಳಿ ಪಾಂಫ್ರೆಟ್ ಕೆಜಿಗೆ 1,500 ರೂ. ಇದ್ದು, ಇದೂ ಇದುವರೆಗಿನ ದಾಖಲೆಯಾಗಿದೆ.
3 ವರ್ಷಗಳ ಹಿಂದೆ ಅಂಜಲ್‌ಗೆ 1 ಸಾವಿರ ರೂ. ಇದ್ದರೆ, ಅದೇ ದುಬಾರಿ. ಆದರೆ ಈಗ 1,500 ರೂ. ಗಡಿಯೂ ದಾಟಿ 1,700-1,800 ರೂ.ಗೆ ತಲುಪಿರುವುದು ಅಂಜಲ್‌ಗೆ ಬರದ ಸಂಕೇತ. ಇನ್ನು ಬಿಳಿ ಪಾಂಫ್ರೆಟ್‌ಗೆ 700-800 ರೂ. ಆಗಿದ್ದರೆ ಅದುವೇ ಗರಿಷ್ಠ ಆಗಿತ್ತು. ಆದರೆ ಈಗ 1300-1400 ರೂ. ವರೆಗೆ ತಲುಪಿದೆ. 350-400 ರೂ. ಇರುತ್ತಿದ್ದ ಕಪ್ಪು ಪಾಂಫ್ರೆಟ್‌ಗೆ ಈಗ 750 – 800 ರೂ. ಆಗಿದೆ. ಇನ್ನು ಸಣ್ಣಪುಟ್ಟ ಮೀನುಗಳೂ ಕೈಗೆ ಎಟುಕುತ್ತಿಲ್ಲ. ನಿತ್ಯ ಮೀನು ಸೇವಿಸುವ ಮಂದಿ,ಉರಿಬಿಸಿಲಿಗೆ ಮೀನು ಸಿಕ್ಕಿದರೂ ರುಚಿಯೇ ಇಲ್ಲ ಎನ್ನುತ್ತಿದ್ದಾರೆ. ಒಟ್ಟಾರೆ ಮೀನು ಪ್ರಿಯರಿಗೆ ಸಾಕಷ್ಟು ತೊಂದರೆಯಾಗಿದೆ.

Leave a Reply

Your email address will not be published. Required fields are marked *

ಆಂಧ್ರಪದೇಶದಲ್ಲಿ ಫ್ಲೋರ್ ಮಾಸ್ಟರ್ಸ್ ಮೊದಲ ಫ್ಲಾಟ್ ಬ್ರೆಡ್ ಸ್ಥಾವರ; ರೂ. 100 ಕೋಟಿ ಹೂಡಿಕೆ, ರಫ್ತು ಆಧಾರಿತ ಉದ್ಯಮ..!

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

error: Content is protected !!