ಜನ ಮನದ ನಾಡಿ ಮಿಡಿತ

ಇತ್ತೀಚಿನ ಸುದ್ದಿ
ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…! ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…! ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು. ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..! ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!
Advertisement

ಚಿಕ್ಕೋಡಿ: ಮದುವೆ ಆದ ಮೂರೇ ದಿನಕ್ಕೆ ದೇಶ ಕಾಯಲು ಪತಿಯನ್ನು ಕಳುಹಿಸಿದ ಪತ್ನಿ

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಹೊತ್ತಲ್ಲಿ ಮದುವೆಯಾದ ಮೂರೇ ದಿನಕ್ಕೆ ಸೈನಿಕರೊಬ್ಬರು ದೇಶ ಸೇವೆಗೆ ವಾಪಸ್ ತೆರಳಿದ್ದಾರೆ.

ಹೌದು, ಮಹಾರಾಷ್ಟ್ರದ ಜಳಗಾಂವ್‌ನ ಪಾಚೋರಾದ ಯೋಧ ಮನೋಜ್ ಪಾಟೀಲ್ ಮದುವೆ ಇದೇ ಮೇಲೆ 5ರಂದು ಅದ್ದೂರಿಯಾಗಿ ನೆರವೇರಿತು. ಇತ್ತ ಮನೆಯಲ್ಲಿ ಮದುವೆ ಸಂಭ್ರಮ ಮನೆಮಾಡಿದ್ರೆ, ಅತ್ತ ಭಾರತ-ಪಾಕ್ ಗಡಿಯಲ್ಲಿ ಆಕ್ರಮಣಕಾರಿ ದಾಳಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮನೋಜ್ ಕುಮಾರ್‌ಗೆ ತುರ್ತಾಗಿ ಸೇನೆಯಿಂದ ಕರೆ ಬಂದಿದೆ. ಮಹಾರಾಷ್ಟ್ರದ ಮನೋಜ್ ಪಾಟೀಲ್ ಹಾಗೂ ನಾಚಂಖೇಡೆಯ ರಾಮಚಂದ್ರ ಪಾಟೀಲ್ ಅವರ ಪುತ್ರಿ ಯಾಮಿನಿ ಅವರಿಗೆ ಮೇ.5 ರಂದು ಅದ್ದೂರಿ ಮದುವೆ ನಿಶ್ಚಯವಾಗಿತ್ತು. ಇದರಿಂದಾಗಿ ಮನೋಜ್ ರಜೆ ಹಾಕಿ ಹಳ್ಳಿಗೆ ಬಂದಿದ್ರು. ಇತ್ತ ಮದುವೆ ಸಂಭ್ರಮದ ನಡುವೆಯೇ ಯೋಧ ಮನೋಜ್ ಪಾಟೀಲ್ ಅವರಿಗೆ ಸೇನೆಯಿಂದ ಕರೆ ಬಂದಿತ್ತು. ತುರ್ತಾಗಿ ಸೇನೆಯಲ್ಲಿ ಸೇರಿಕೊಳ್ಳುವಂತೆ ಸೂಚಿಸಲಾಗಿತ್ತು. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಯುದ್ಧದ ಆತಂಕ ಶುರುವಾಯಿತು.

ಇತ್ತ ಮದುವೆಯಾದ ಮೂರನೇ ದಿನ ಮಗನನ್ನ ಸೇನೆಗೆ ಕಳುಹಿಸಬೇಕಲ್ಲಾ ಎಂದು ಪೋಷಕರು ಚಿಂತಿತರಾಗಿದ್ರೆ, ಪತಿಯೊಂದಿಗೆ ಜೀವನದ ಸುಂದರ ಕನಸು ಕಂಡಿದ್ದ ಪತ್ನಿ ಯಾಮಿನಿ ಕಣ್ಣೀರಿಡುತ್ತಾ ಮೌನಕ್ಕೆ ಜಾರಿದ್ದರು. ಈ ವೇಳೆ ಮನೋಜ್ ಪಾಟೀಲ್ ಏನು ಮಾಡಲಾಗದೇ ಸೇನೆಗೆ ಹೊರಟು ನಿಂತ್ರೆ, ಯೋಧನ ಕೈ ಹಿಡಿದ ಸಂಗಾತಿ ಆತನಿಗೆ ಧೈರ್ಯ ತುಂಬುತ್ತಾ ನನಗೆ ದೇಶ ಸೇವೆ ಮುಖ್ಯ. ನನ್ನ ಕುಂಕುಮವನ್ನು ಗಡಿಗೆ ಕಳಿಸುತ್ತಿರುವುದು ನನಗೆ ಹೆಮ್ಮೆ ಇದೆ ಎಂದು ಕಣ್ಣೀರು ಹಾಕಿದ್ದಾರೆ. ಇದೀಗ ಮೇ.8ನೇ ತಾರೀಕು ಮನೋಜ್ ಪಾಟೀಲ್ ದೇಶ ಸೇವೆಗೆ ಹೊರಡುವ ಸಮಯ ಬಂದೇ ಬಿಟ್ಟಿತು. ಒಂದು ಕಡೆ ಮನೆಯವರು ಮದುವೆಯ ಮೂರನೇ ದಿನಕ್ಕೆ ಗಡಿಗೆ ಕಳುಹಿಸಲು ಇಷ್ಟವಿಲ್ಲದಿದ್ದರೂ,ದೇಶ ಸೇವೆಯೇ ಮುಖ್ಯ ಅಂತ ಮಗನ ಜೊತೆ ನಿಂತರು. ಇತ್ತ ಪತ್ನಿ ಕೂಡ ಗಂಡನಿಗೆ ಧೈರ್ಯ ಹೇಳುತ್ತಾ ರೈಲ್ವೇ ನಿಲ್ದಾಣದ ಕಡೆಗೆ ಹೊರಟು ಬಿಟ್ಟರು. ಯೋಧ ಮನೋಜ್ ಪಾಟೀಲ್ ಅರಿಶಿನ ಹಚ್ಚಿದ ದೇಹ, ಕೈಯಲ್ಲಿ ಮೆಹಂದಿಯೊAದಿಗೆ ಗಡಿಗೆ ದೇಶ ಸೇವೆಗೆ ಹೊರಟರು. ಈ ವೇಳೆ ಪತ್ನಿ ದೇಶ ಸೇವೆಗೆ ಹೊರಡುತ್ತಿರುವ ಪತಿಗೆ ಕಣ್ಣೀರ ವಿದಾಯ ಹೇಳಿದ್ದು, ಒಂದು ಕ್ಷಣ ಇಡೀ ರೈಲ್ವೇ ನಿಲ್ದಾಣವೇ ಕಣ್ಣೀರ ಕಡಲಲ್ಲಿ ಮುಳುಗಿತು.

Leave a Reply

Your email address will not be published. Required fields are marked *

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆ…!

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ ಆಗಮಿಸಿ ಚುನಾವಣಾ ಪ್ರಕ್ರಿಯೆಗಳ ಅವಲೋಕನ ನಡೆಸಿದರು.

ಸೂರಿಕುಮೇರು: ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಪಿಕಪ್ ವಾಹನ ಡಿ*ಕ್ಕಿ..!

ಉಡುಪಿ: ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕನ ಬಂಧನ…!

ಉಡುಪಿ: ನಾವುಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರು ಮತ್ತು ಟ್ರಕ್ ನಡುವೆ ಭೀಕರ ಅಪಘಾತ….!

ಪುಂಜಾಲಕಟ್ಟೆ: ಪುಂಜಾಲಕಟ್ಟೆಯ ಬಸವನಗುಡಿ ಎಂಬಲ್ಲಿ ಸ್ಕೂಟರ್‌ಗೆ ಕೆ.ಎಸ್ ಆರ್ ಟಿಸಿ ಬಸ್ ಡಿ*ಕ್ಕಿ….!

ನಾಟೇಕಲ್: ಮನೆ ಗೋಡೆಗೆ ಹಾರಿ ಬಡಿದ ಕಾರು; ಪಾರಾದ ಪ್ರಯಾಣಿಕರು….!

error: Content is protected !!