ದೇವಾಡಿಗ ಸಮಾಜ ಸೇವಾ ಸಂಘ (ರಿ)ಪಾವಂಜೆ,ಮಹಿಳಾ ವೇದಿಕೆ, ಯುವ ವೇದಿಕೆ, ಸೇವಾ ಟ್ರಸ್ಟಿನ ಸಂಯುಕ್ತ ಆಶ್ರಯ ದಲ್ಲಿ ಭಜನೋತ್ಸವವು ಬೆಳಿಗ್ಗೆ 6.05 ಸಂಜೆ 6.55 ಗಂಟೆವರೆಗೆ ನಡೆಯಲಿದ್ದು ಸುಮಾರು ಹನ್ನೊಂದು ತಂಡಗಳು ಭಾಗವಹಿಸಲಿದೆ. ಈ ಸಂದರ್ಭದಲ್ಲಿ ಶ್ರೀ ರಘು ದೇವಾಡಿಗ ಉಪಾಧ್ಯಕ್ಷರು, ಶ್ರೀ ವಿಠ್ಠಲ ದೇವಾಡಿಗ ಅರಂದು, ಶ್ರೀ ಲಿಂಗಪ್ಪ ದೇವಾಡಿಗ, ರಮೇಶ್ ದೇವಾಡಿಗ ಪಾವಂಜೆ ಇವರು ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷ ಶ್ರೀ ಅಣ್ಣಪ್ಪ ದೇವಾಡಿಗ, ಯಾದವ ದೇವಾಡಿಗ, ಜನಾರ್ದನ ಪಡುಪಣಂಬೂರು, ರಮೇಶ್ ದೇವಾಡಿಗ ತೋಕೂರು, ರಾಮದಾಸ್ ಪಾವಂಜೆ, ಜಗದೀಶ್ ಪಲಿಮಾರ್, ನಿಖಿಲ್ ದೇವಾಡಿಗ, ವಾಮನ ದೇವಾಡಿಗ, ಸುಬ್ರತ್, ಹಾಗೂ ಸಂಘದ ಸದಸ್ಯರು ಯುವ ವೇದಿಕೆ ಅಧ್ಯಕ್ಷರು, ಹಾಗೂ ಸದಸ್ಯರು,ಮಹಿಳಾ ವೇದಿಕೆ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ, ಮಂಜುಳಾ ಸುಬ್ರತ್, ಅನುಪಮಾ ಮತ್ತು ಸದಸ್ಯರು ಉಪಸ್ಥಿತರಿದ್ದರು.



