ಜನ ಮನದ ನಾಡಿ ಮಿಡಿತ

Advertisement

ಕುಂದಾಪುರ: ಕುಂದಾಪುರ ಮಹಿಳೆಯ ನಾಪತ್ತೆ ಕೇಸ್ ; ಪ್ರೀತಿ ಹಂಗಾಮ, ಸೂಸೈಡ್ ಹೈಡ್ರಾಮಾ..?? ಅಸಲಿ ಕಹಾನಿ

ಕೆಲವೊಂದು ಭಾವನೆಗಳೇ ಹಾಗೆ ಅವುಗಳಿಗೆ ವಯಸ್ಸು, ಪರಿಸ್ಥಿತಿ, ಒಳ್ಳೆಯದು, ಕೆಟ್ಟದು ಹೀಗೆ ಯಾವುದರ ಪರಿವೂ ಇರುವುದಿಲ್ಲ. ಅಂತಹದೇ ಭಾವನೆಗಳ ಪೈಕಿ ಪ್ರೀತಿಯೂ ಒಂದು. ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಕುಂದಾಪುರ ಮಹಿಳೆ ಹೀನಾ ಕೌಸರ್ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಡೆತ್ ನೋಟ್ ಬರೆದಿಟ್ಟು ಅಸಲಿಗೆ ಆಕೆ ಹೋಗಿದ್ದೆಲ್ಲಿಗೆ..? ತನ್ನ ಚಪ್ಪಲಿ, ಸ್ಕೂಟರ್ ಎಲ್ಲವನ್ನು ನದಿ ತೀರದಲ್ಲಿ ಬಿಟ್ಟು ಆಕೆ ಆಡಿದ ಸೂಸೈಡ್ ಹೈಡ್ರಾಮಾ ಹೇಗಿತ್ತು ಗೊತ್ತಾ?

ಈಕೆ ಕುಂದಾಪುರ ವಿಠ್ಠಲವಾಡಿ ನಿವಾಸಿ 33 ವರ್ಷದ ಹೀನಾ ಕೌಸರ್ ಅನ್ನುವ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯ ಮನೆಯಲ್ಲಿ ವಾಸವಿದ್ಲು. ಇನ್ನು ಆಕೆಯ ಗಂಡ ವಿದೇಶದಲ್ಲಿ ಕೆಲ್ಸ ಮಾಡ್ತಾಯಿದ್ದು ಆಗಾಗ ಊರಿಗೆ ಬರ್ತಾ ಇದ್ನನಂತೆ. ಹೀಗೆ ಎಲ್ಲವು ಶಾಂತವಾಗೇ ಇತ್ತು. ಆದ್ರೆ ಜೂನ್ 8 ರಾತ್ರೋರಾತ್ರಿ ಹೀನಾ ಕೌಸರ್ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ಳು . ಗಾಬರಿಕೊಂಡ ಆಕೆಯ ಮನೆಯವರು ಮೇಲಿಂದ ಮೇಲೆ ಆಕೆಗೆ ಕರೆ ಮಾಡಿದ್ರು. ಆದ್ರೆ ಯಾವುದೇ ಪ್ರಯೋಜನವಾಗ್ಲಿಲ್ಲ ಆಕೆಯ ಫೋನ್ ಆಗಲೇ ಸ್ವಿಚ್ ಆಫ್ ಆಗಿತ್ತು. ಇದ್ರಿಂದ ಮತ್ತಷ್ಟು ಗಾಬರಿಕೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು .

ತಕ್ಷಣವೇ ಪೊಲೀಸರು ಕೂಡ ತನಿಖೆ ಆರಂಭಿಸಿದ್ರು. ಮರುದಿನ ನಸುಕಿನ ಜಾವ ನಾಲ್ಕು ಗಂಟೆಗೆ ಕೋಡಿ ಸೇತುವೆಯ ಬಳಿ ಹೀನಾ ಕೌಸರ್ ಚಪ್ಪಲಿಗಳು ಮತ್ತು ಆಕೆಯ ಸ್ಕೂಟರ್ ಪತ್ತೆಯಾಗಿತ್ತು. ಇದಕ್ಕೆ ಪುಷ್ಟಿ ಎಂಬAತೆ ಆಕೆ ಬರೆದಿದ್ದ ಡೆತ್ ನೋಟ್ ಕೂಡ ಪೋಲೀಸರ ಕೈ ಸೇರುತ್ತದೆ. ಎಲ್ಲವನ್ನು ತಾಳೆ ಹಾಕಿ ನೋಡಿದ ಪೊಲೀಸರು ಹೀನಾ ಕೌಸರ್ ನದಿಗೆ ಹಾರಿ ಸೂಸೈಡ್ ಮಾಡಿರಬಹುದೆಂದು ದೃಢವಾಗಿ ಊಹಿಸಿ ನದಿಯಲ್ಲಿ ಹುಡುಕಾಟ ಕೂಡ ಆರಂಭಿಸಿದ್ರು. ಅಗ್ನಿಶಾಮಕ ದಳದಿಂದ ಕಳೆದೆರಡು ದಿನಗಳಿಂದ ಹೀನ ಕೌಸರ್ ಗಾಗಿ ತೀವ್ರ ಶೋಧ ನಡೆತಿತ್ತು. ಎಲ್ಲವೂ ಮುಗಿಯಿತು ಇನ್ನೇನು ಆಕೆಯ ಮೃತದೇಹ ಸಿಕ್ಕಿಯೇ ಬಿಡುತ್ತದೆ ಎಂಬುವಷ್ಟರಲ್ಲಿ ಇದೀಗ ಈ ಪ್ರಕರಣಕ್ಕೆ ಅನೀರಿಕ್ಷಿತ ಟ್ವಿಸ್ಟ್ ಒಂದು ಸಿಕ್ಕಿದೆ. ಅಸಲಿಗೆ ಹೀನಾ ನದಿಗೆ ಹಾರಿಯೇ ಇಲ್ಲ ಡೆತ್ ನೋಟ್, ಚಪ್ಪಲಿ, ಸ್ಕೂಟರ್ ಎಲ್ಲವನ್ನು ಸಿಗುವಂತೆ ಮಾಡಿ ಸೂಸೈಡ್ ಹೈಡ್ರಾಮಾ ಆಡಿದ್ದಳು. ಅಷ್ಟಕ್ಕೂ ಆಕೆ ಸಾಯುವ ನಾಟಕ ಆಡಿದ್ಯಾಕೆ? ಅನ್ನೋ ಪ್ರಶ್ನೆಗೆ ಮತ್ತದೇ ಉತ್ತರ ಪ್ರೀತಿ. ಹೌದು ಹೀನಾ ಸೂಸೈಡ್ ಡ್ರಾಮಾವಾಡಿ 26 ವರ್ಷದ ಸಾಹಿಲ್ ಅನ್ನುವ ಯುವಕನ ಜೊತೆ ಪರಾರಿಯಾಗಿದ್ದಾಳೆ. ಎರಡು ಮಕ್ಕಳ ತಾಯಿ ಗಂಡ, ಮಕ್ಕಳು ಎಲ್ಲವನ್ನು ಮರೆತು ಹುಚ್ಚು ಪ್ರೀತಿ ಹರಸಿ ತನ್ನಗಿಂತ ಏಳು ವರ್ಷ ಚಿಕ್ಕವನ ಜೊತೆ ಓಡಿಹೋಗಿದ್ದಾಳೆ ಅಂದ್ರೆ ಪ್ರೀತಿಗೆ ನಿಜಕ್ಕೂ ಕಣ್ಣು ಕಾಣೋದಿಲ್ಲ ಅನ್ನೋದು ಮತ್ತೆ ಸಾಬೀತಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!