ಜನ ಮನದ ನಾಡಿ ಮಿಡಿತ

Advertisement

ದಾಳಿಗೆ ಪ್ರತೀಕಾರ.. ಅಮೆರಿಕ ವಿರುದ್ಧ ಇರಾನ್ ಅಟ್ಯಾಕ್

ಗೇಮ್ ಈಸ್ ನಾಟ್ ಓವರ್?.. ಇದು ನಿನ್ನೆ ಇರಾನ್ ಕೈಗೊಂಡಿದ್ದ ರಣಪ್ರತಿಜ್ಞೆ. ಶಕ್ತಿಶಾಲಿ ಪರಮಾಣು ನೆಲೆಗಳನ್ನು ಧ್ವಂಸ ಮಾಡಿ ಗಹಗಹಿಸಿದ್ದ ಅಮೆರಿಕಕ್ಕೆ ಸವಾಲೆಸೆದಿದ್ದ ಇರಾನ್.

ಇನ್ನೂ ಆಟ ಮುಗಿದಿಲ್ಲ, ಯಾರನ್ನೂ ಬಿಡುವ ಮಾತೇ ಇಲ್ಲ ಅಂತ ಶಪಥಗೈದಿತ್ತು. ಇವತ್ತು ಕೆಣಕಿದ ದೊಡ್ಡಣ್ಣನ ಮೇಲೆ ದಾಳಿ ಮಾಡುವ ಮೂಲಕ ಇರಾನ್ ನನಗ್ಯಾರ ಭಯವಿಲ್ಲ ಅಂತ ಎದೆಯೊಡ್ಡಿದೆ. ಇದರ ಬೆನ್ನಲ್ಲೇ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಘೋಷಿಸಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಅಮೆರಿಕ ಏಟಿಗೆ ಇರಾನ್ ಎದುರೇಟು.. ಅಮೆರಿಕ ವಾಯುನೆಲೆಗಳ ಮೇಲೆ ತೂಫಾನ್‌ಗಳಂತೆ ತೂರಿಬಂದ ಮಿಸೈಲ್‌ಗಳು. ರಾತ್ರಿ ಆಕಾಶದಲ್ಲಿ ಬಾಂಬ್‌ಗಳ ಸುರಿಮಳೆ.. ಹೆದರಿ ಕಕ್ಕಾಬಿಕ್ಕಿಯಾಗಿ ಓಡಿದ ನಾಗರಿಕರು. ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದಂತೆ ಅಮೆರಿಕ ವಿರುದ್ಧ ಇರಾನ್ ಯುದ್ಧ ಆರಂಭಿಸಿದೆ. ಆಪರೇಷನ್ ಬಷಯೇರ್ ಅಲ್ ಫತಾಹ್ ಅಂದ್ರೆ ಟೈಡಿಂಗ್ ಆಫ್ ವಿಕ್ಟರಿ ಅನ್ನೋ ಹೆಸರಲ್ಲಿ ಇರಾನ್ ದಾಳಿ ನಡೆಸಿದೆ. ಕತಾರ್ ಕ್ಯಾಪಿಟಲ್ ದೋಹಾದಲ್ಲಿರುವ ಅಲ್ ಉದೈದ್ ಏರ್‌ಬೇಸ್ ಟಾರ್ಗೆಟ್ ಮಾಡಿದೆ. ಸೇನಾ ನೆಲೆಗಳ ಮೇಲೆ ಇರಾನ್ 6 ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದೆ. ಜನ ಪ್ರಾಣಭಯದಿಂದ ಓಡಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

ಮಂಗಳೂರು: ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಕಡೆ ಜಾನುವಾರು ವಧೆ…!

ಉಡುಪಿ: ಅಂಬಲಪಾಡಿಯಲ್ಲಿ ನೇಣಿಗೆ ಶರಣಾದ ಯುವಪ್ರೇಮಿಗಳು….!

ಮಂಗಳೂರು: ಮಾಧವ ಕೊಳತ್ತ ಮಜಲು ಅವರಿಗೆ ಕದ್ರಿ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ..!

error: Content is protected !!