ಜನ ಮನದ ನಾಡಿ ಮಿಡಿತ

Advertisement

ದಾಳಿಗೆ ಪ್ರತೀಕಾರ.. ಅಮೆರಿಕ ವಿರುದ್ಧ ಇರಾನ್ ಅಟ್ಯಾಕ್

ಗೇಮ್ ಈಸ್ ನಾಟ್ ಓವರ್?.. ಇದು ನಿನ್ನೆ ಇರಾನ್ ಕೈಗೊಂಡಿದ್ದ ರಣಪ್ರತಿಜ್ಞೆ. ಶಕ್ತಿಶಾಲಿ ಪರಮಾಣು ನೆಲೆಗಳನ್ನು ಧ್ವಂಸ ಮಾಡಿ ಗಹಗಹಿಸಿದ್ದ ಅಮೆರಿಕಕ್ಕೆ ಸವಾಲೆಸೆದಿದ್ದ ಇರಾನ್.

ಇನ್ನೂ ಆಟ ಮುಗಿದಿಲ್ಲ, ಯಾರನ್ನೂ ಬಿಡುವ ಮಾತೇ ಇಲ್ಲ ಅಂತ ಶಪಥಗೈದಿತ್ತು. ಇವತ್ತು ಕೆಣಕಿದ ದೊಡ್ಡಣ್ಣನ ಮೇಲೆ ದಾಳಿ ಮಾಡುವ ಮೂಲಕ ಇರಾನ್ ನನಗ್ಯಾರ ಭಯವಿಲ್ಲ ಅಂತ ಎದೆಯೊಡ್ಡಿದೆ. ಇದರ ಬೆನ್ನಲ್ಲೇ ಟ್ರಂಪ್, ಇರಾನ್ ಮತ್ತು ಇಸ್ರೇಲ್ ಕದನ ವಿರಾಮ ಘೋಷಿಸಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಹೇಳಿಕೆಯನ್ನು ಇರಾನ್ ತಿರಸ್ಕರಿಸಿದೆ. ಅಮೆರಿಕ ಏಟಿಗೆ ಇರಾನ್ ಎದುರೇಟು.. ಅಮೆರಿಕ ವಾಯುನೆಲೆಗಳ ಮೇಲೆ ತೂಫಾನ್‌ಗಳಂತೆ ತೂರಿಬಂದ ಮಿಸೈಲ್‌ಗಳು. ರಾತ್ರಿ ಆಕಾಶದಲ್ಲಿ ಬಾಂಬ್‌ಗಳ ಸುರಿಮಳೆ.. ಹೆದರಿ ಕಕ್ಕಾಬಿಕ್ಕಿಯಾಗಿ ಓಡಿದ ನಾಗರಿಕರು. ಪ್ರತೀಕಾರ ತೀರಿಸಿಕೊಳ್ಳುವ ಶಪಥ ಮಾಡಿದಂತೆ ಅಮೆರಿಕ ವಿರುದ್ಧ ಇರಾನ್ ಯುದ್ಧ ಆರಂಭಿಸಿದೆ. ಆಪರೇಷನ್ ಬಷಯೇರ್ ಅಲ್ ಫತಾಹ್ ಅಂದ್ರೆ ಟೈಡಿಂಗ್ ಆಫ್ ವಿಕ್ಟರಿ ಅನ್ನೋ ಹೆಸರಲ್ಲಿ ಇರಾನ್ ದಾಳಿ ನಡೆಸಿದೆ. ಕತಾರ್ ಕ್ಯಾಪಿಟಲ್ ದೋಹಾದಲ್ಲಿರುವ ಅಲ್ ಉದೈದ್ ಏರ್‌ಬೇಸ್ ಟಾರ್ಗೆಟ್ ಮಾಡಿದೆ. ಸೇನಾ ನೆಲೆಗಳ ಮೇಲೆ ಇರಾನ್ 6 ಖಂಡಾಂತರ ಕ್ಷಿಪಣಿಗಳ ದಾಳಿ ನಡೆಸಿದೆ. ಜನ ಪ್ರಾಣಭಯದಿಂದ ಓಡಿದ ದೃಶ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

ಹಾಸನ: ಸಿಡಿಲು ಬಡಿದು ಆಂಜನೇಯ ಸ್ವಾಮಿ ದೇವಾಲಯದ ಅರ್ಚಕ ಮೃತ್ಯು..!

ಮಂಗಳೂರು : ಶ್ರೀ ಭದ್ರಕಾಳಿ ಚೆಂಡೆ ತಂಡದ ಮಾಲೀಕ ಹೃ*ದಯಾಘಾ*ತದಿಂದ ಮೃ*ತ್ಯು..!

error: Content is protected !!