ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಮೂವ ಗುರಿಮಜಲ್ ವಿಠ್ಠಲ್ ಪೂಜಾರಿ ಮನೆಗೆ ತಾಗಿಕೊಂಡಿದ್ದ ಬಚ್ಚಲು ಮನೆ ಸಂಪೂರ್ಣ ಹಾನಿಯಾದ ಘಟನೆ ನಡೆದಿದೆ.

ಸ್ನಾನಗೃಹದ ಛಾವಣಿ ಮತ್ತು ಗೋಡೆಗಳು ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಆದರೆ ಯಾವುದೇ ಜೀವ ಹಾನಿಯಾದ ಬಗ್ಗೆ ಮಾಹಿತಿ ಇಲ್ಲ.

ಘಟನಾ ಸ್ಥಳಕ್ಕೆ ಕುರಿಯಾಳ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ್ ಕುಮಾರ್, ಪಂಚಾಯತ್ ಸದಸ್ಯ ದಿನೇಶ್, ಗ್ರಾಮ ಕರಣಿಕ ಹಾಗೂ ಪಂಚಾಯತ್ ಸಿಬ್ಬಂದಿ ಚೇತನ್ ಕುಮಾರ್ ಹಾಗೂ ಶ್ರೀ ದೇವಿ ರೂಪೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



