ಅನೈತಿಕ ಸಂಬಂಧವಿಟ್ಟುಕೊಂಡಿದ್ದ ಪ್ರಿಯಕರನೇ ಮಹಿಳೆಯನ್ನು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿರೆಪಡಸಲಗಿ ಗ್ರಾಮದಲ್ಲಿ ಜ.14 ರಂದು ರಾತ್ರಿ ನಡೆದಿದೆ.

ಯಮನವ್ವ(40) ಕೊಲೆಯಾದ ಮಹಿಳೆ. ಶ್ರೀಶೈಲ ಪಾಟೀಲ್(67) ಕೊಲೆಗೈದ ಆರೋಪಿ. ಸುಮಾರು 20 ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನೆ ಪಡೆದಿದ್ದ ಯಮನವ್ವ, ಶ್ರೀಶೈಲ ಪಾಟೀಲ್ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಅಷ್ಟೇ ಅಲ್ಲದೇ ಇತ್ತೀಚೆಗೆ 27 ವರ್ಷದ ಯುವಕನೊಂದಿಗೆ ಸಂಪರ್ಕ ಹೊಂದಿದ್ದಾಳೆ ಎಂಬ ವಿಷಯ ತಿಳಿದ ನಂತರ ಇಬ್ಬರ ಮಧ್ಯೆ ತೀವ್ರವಾದ ಜಗಳ ಉಂಟಾಗಿತ್ತು. ಬಳಿಕ ಶ್ರೀಶೈಲ ಯಮನವ್ವಳ ಕಿವಿಗೆ ಬಲವಾಗಿ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ಉಸಿರು ನಿಂತ ಮೇಲೆ ಆಘಾತಗೊಂಡು ಮರುದಿನ ಬೆಳಿಗ್ಗೆ ಯಮನವ್ವ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ಅಕ್ಕಪಕ್ಕದವರಿಗೆ ಆತನೇ ತಿಳಿಸಿದ್ದಾನೆ. ಬಳಿಕ ಮೃತದೇಹದ ಮುಂದೆ ಮೊಸಳೆ ಕಣ್ಣಿರು ಹಾಕಿದ್ದಾನೆ. ಇನ್ನು ಪೊಲೀಸರಿಗೂ ಆತನೇ ಮಾಹಿತಿ ನೀಡಿದ್ದಾನೆ. ವಿಚಾರಣೆಯ ವೇಳೆ ಆರೋಪಿಯ ಬಣ್ಣ ಬಯಲಾಗಿದ್ದು ಬಳಿಕ ಸತ್ಯ ಒಪ್ಪಿಕೊಂಡಿದ್ದಾನೆ.



