ಕಾವಳಪಡೂರು ಗ್ರಾಮದ ಬರ್ಕಟ ಎಂಬಲ್ಲಿ ಪೋಲೀಸ್ ಇಲಾಖೆಯ ಕಚೇರಿ ನಿರ್ಮಾಣಕ್ಕೆ ಮೀಸಲು ಇರಿಸಲಾಗಿದ್ದ ಜಾಗವನ್ನು ಪೋಲೀಸ್ ಮಹಾನಿರ್ದೇಶಕ ಸಲೀಂ ಅವರು ವೀಕ್ಷಿಸಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಕಚೇರಿ ಹಾಗೂ ಮೈದಾನ ನಿರ್ಮಿಸಲು ಸುಮಾರು 14 ಎಕರೆ ಜಮೀನು ಮಂಜೂರಾಗಿದ್ದು, ಈ ಜಾಗವನ್ನು ಅವರು ವೀಕ್ಷಿಸಿ ಜಿಲ್ಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. 
ಬಳಿಕ ಬೆಂಜನಪದವಿನಲ್ಲಿರುವ ಸ್ಪೆಷಲ್ ಆಕ್ಷನ್ ಪೋರ್ಸು ಕಚೇರಿಗೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವೀಕ್ಷಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಐಜಿಪಿ ಅಮಿತ್ ಸಿಂಗ್, ಎಸ್. ಪಿ.ಡಾ| ಅರುಣ್ ಹಾಗೂ ಹೌಸಿಂಗ್ ಬೋರ್ಡ್ ಸೊಸೈಟಿಯ ಅಧಿಕಾರಗಳು ಉಪಸ್ಥಿತರಿದ್ದರು.



