ಜನ ಮನದ ನಾಡಿ ಮಿಡಿತ

Advertisement

ಜಿಂಕೆ ಬೇಟೆಯಾಡುತ್ತಿದ್ದ ವೇಳೆಯೇ ಸಿಕ್ಕಿ ಬಿದ್ದ ಆರೋಪಿಗಳು…!

ಹುಣಸೂರು: ನಾಗರಹೊಳೆ ಉದ್ಯಾನದಲ್ಲಿ ಜಿಂಕೆಯನ್ನು ಬೇಟೆಯಾಡುತ್ತಿದ್ದ ಇಬ್ಬರು ಅರೋಪಿಗಳನ್ನು ಬಂಧಿಸಿರುವ ಘಟನೆ ಏಪ್ರಿಲ್ 28 ರ ಮಂಗಳವಾರ ನಡೆದಿದ್ದು, ಅರಣ್ಯಾಧಿಕಾರಿಗಳು ಕೃತ್ಯಕ್ಕೆ ಬಳಸಿದ್ದ ಪರಿಕರಗಳನ್ನು ವಶಪಡಿಸಿಕೊಂಡಿರುವ ಘಟನೆ ವೀರನಹೊಸಳ್ಳಿ ವಲಯದಲ್ಲಿ ನಡೆದಿದೆ.

 

ತಾಲೂಕಿನ ಹನಗೋಡು ಹೋಬಳಿಯ ಶಿಂಡೇನಹಳ್ಳಿ ರವಿಕುಮಾ‌ರ್ ಆಲಿಯಾಸ್ ಅಮಾಸೆ ರವಿ ಹಾಗೂ ಬೋವಿ ಕಾಲೋನಿಯ ರಾಜು ಆಲಿಯಾಸ್ ಗುಂಡ ಬಂಧಿತ ಆರೋಪಿಗಳು.

ಶಿಂಡೇನಹಳ್ಳಿಯ ಸೀನೇಗೌಡರ ಪುತ್ರ ಸುನಿಲ್‌, ಮುದಗನೂರಿನ ಬಸವೇಗೌಡರ ಪುತ್ರ ಎಂ.ಬಿ.ಗಣೇಶ ಕತ್ತಲಿನಲ್ಲಿ ಪರಾರಿಯಾಗಿರುವ ಆರೋಪಿಗಳು.

ಹೆಣ್ಣು ಜಿಂಕೆಯ ಶವ, ಬೇಟೆಗೆ ಬಳಸಿದ್ದ ಸಿಂಗಲ್ ಬ್ಯಾರಲ್ ಬಂದೂಕು, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮಚ್ಚು, 5 ಜೀವಂತ ಕಾಡತೂಸುಗಳು, ಬಳಕೆ ಮಾಡಿದ್ದ 1 ಕಾಡುತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ: ಆರೋಪಿಗಳು ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯಕ್ಕೆ ವನ್ಯಜೀವಿ ಭೇಟೆಯಾಡಲು ಬರುತ್ತಿರುವ ಬಗ್ಗೆ ಮಂಗಳವಾರ ಬೆಳಗಿನ ಜಾವ ಬಂದ ಖಚಿತ ಮಾಹಿತಿ ಮೇರೆಗೆ ನಾಗರಹೊಳೆ ಹುಲಿಯೋಜನೆ ನಿರ್ದೇಶಕಿ ಪಿ.ಎ.ಸೀಮಾರವರ ಮಾರ್ಗದರ್ಶನದಲ್ಲಿ ಆ‌ರ್.ಎಫ್.ಓ ವಿನೋದ್‌ಗೌಡ ನೇತೃತ್ವದ ತಂಡ ಕಣ್ಣಾವಲಿದ್ದ ವೇಳೆ ಬೆಳಗಿನ ಜಾವ 4ರ ವೇಳೆಗೆ ಚಾಮಳ್ಳಿ ಶಾಖೆಯ ಎರೆಕಟ್ಟೆ ಗಸ್ತಿನ ಹೊಸಕಟ್ಟೆ ಕೆರೆ-ಎರಕಟ್ಟೆ ಬಳಿಯ ಜೀಪ್ ರಸ್ತೆಯ ತಿರುವಿನ ಬಳಿ ಗುಂಡಿನ ಶಬ್ದ ಕೇಳಿ ಬಂದ ಕಡೆ ಸಿಬ್ಬಂದಿಗಳು ದೌಡಾಯಿಸಿ ಸುತ್ತುವರಿಯುತ್ತಿದ್ದಂತೆ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕತ್ತಲಿನಲ್ಲಿ ಮತ್ತಿಬ್ಬರು ಪರಾರಿಯಾಗಿದ್ದಾರೆ.

ಆರೋಪಿಗಳಿಂದ ಪರಿಕರಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮಾಹಿತಿ ನೀಡಲು ಎಸಿಎಫ್ ಮನವಿ: ಅರಣ್ಯದಂಚಿನ
ಗ್ರಾಮಸ್ಥರು ಉದ್ಯಾನದೊಳಗೆ ಅಕ್ರಮ ಪ್ರವೇಶ, ಇಂತಹ ಅಪರಾಧ ಕೃತ್ಯಗಳು ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡುವಂತೆ ಎಸಿಎಫ್‌ ಲಕ್ಷ್ಮೀಕಾಂತ್ ಮನವಿ ಮಾಡಿದ್ದಾರೆ. ಸೋಮವಾರ ಓರ್ವನನ್ನು ಬಂಧಿಸಿದ್ದರು. ವಾರದ ಹಿಂದಷ್ಟೆ ಮತ್ತೊಂದು ಪ್ರಕರಣದಲ್ಲಿ ಭೇಟೆಯಾಡಲು ಹೊಂಚು ಹಾಕಿದ್ದ ಇಬ್ಬರನ್ನು ಬಂದಿಸಿರುವುದನ್ನು ಸ್ಮರಿಸಬಹುದು.
ಕಾರ್ಯಾಚರಣೆಯಲ್ಲಿ ಆರ್.ಎಫ್.ಓ. ವಿನೋದ್‌ಗೌಡ, ಡಿಆರ್‌ಎಫ್‌ಓ ನವೀನ್‌ಕುಮಾರ್, ಸಹನಾ ವಿ.ಪಾಟೀಲ್, ಕೆ.ಶಿಲ್ಪ, ಗಸ್ತು ಅರಣ್ಯಪಾಲಕರಾದ ವೆಂಕಟೇಶ್‌, ಶಮಂತ, ನಾರಾಯಣ, ಅವಿನಾಶ್, ಅರಣ್ಯ ವೀಕ್ಷಕರಾದ ಶಾಂತಕುಮಾ‌ರ್, ಶಿವಕುಮಾರ್, ಗಾಯಿತ್ರಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!