ಹಾವೇರಿಯ ಕಬ್ಬೂರು ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.ಹಾವೇರಿಯ ಕಬ್ಬೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ದುರ್ದೈವಿ.
ಶಿವು ನಿಂಗಪ್ಪ ಪಟ್ಟೇದ ಎಂಬಾತ ಈ ಭೀಕರ ಕೃತ್ಯದಲ್ಲಿ ಆರೋಪಿ. ಮೃತ ನಿಂಗಪ್ಪ-ಆರೋಪಿ ಶಿವು ಮನೆಗಳು ಅಕ್ಕಪಕ್ಕದಲ್ಲಿವೆ.
ಇಬ್ಬರಿಗೂ ಕುಡಿತದ ಚಟವಿತ್ತು. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಆಗಿತ್ತು. ಈಮೊದಲೇ ಒಂದು ಬಾರಿ ತಲೆಗೆ ಗಾಯಗಳಾಗುವಂತೆ ಆರೋಪಿ ಶಿವು ಹೊಡೆದಿದ್ದ ಎನ್ನಲಾಗಿದೆ. ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಮಾಡಿಸಿದ್ದರೂ ಸಹ ಶಾಂತಿ ಉಳಿಯಲಿಲ್ಲ.ಇಂದು ಬೆಳಿಗ್ಗೆ ಮತ್ತೆ ಏಕಾಏಕಿ ಹಲ್ಲೆ ಶಿವು ಹಲ್ಲೆ ಮಾಡಿದ. ತಲೆಗೆ ಬಲವಾಗಿ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ನಿಂಗಪ್ಪ ಸಾವನ್ನಪ್ಪಿದ. “ನಾನೇ ಕೊಲೆ ಮಾಡಿದ್ದೇನೆ” ಎಂದು ಪೊಲೀಸರ ಮುಂದೆ ಆರೋಪಿ ಶಿವು ಶರಣಾಗಿದ್ದಾನೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



