ಜನ ಮನದ ನಾಡಿ ಮಿಡಿತ

Advertisement

ಹಾವೇರಿ: ಹಳೆಯ ವೈಷಮ್ಯಕ್ಕೆ ರಕ್ತಪಾತ; ಕಬ್ಬೂರು ಗ್ರಾಮದಲ್ಲಿ ವ್ಯಕ್ತಿ ಹತ್ಯೆ…!

 

ಹಾವೇರಿಯ ಕಬ್ಬೂರು ಗ್ರಾಮದಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ನಡೆದು ಓರ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

 

ಕುಡಿದ ಮತ್ತಿನಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ.ಹಾವೇರಿಯ ಕಬ್ಬೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ದುರ್ದೈವಿ.
ಶಿವು ನಿಂಗಪ್ಪ ಪಟ್ಟೇದ ಎಂಬಾತ ಈ ಭೀಕರ ಕೃತ್ಯದಲ್ಲಿ ಆರೋಪಿ. ಮೃತ ನಿಂಗಪ್ಪ-ಆರೋಪಿ ಶಿವು ಮನೆಗಳು ಅಕ್ಕಪಕ್ಕದಲ್ಲಿವೆ.
ಇಬ್ಬರಿಗೂ ಕುಡಿತದ ಚಟವಿತ್ತು. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಇಬ್ಬರ ನಡುವೆ ಜಗಳ ಆಗಿತ್ತು. ಈಮೊದಲೇ ಒಂದು ಬಾರಿ ತಲೆಗೆ ಗಾಯಗಳಾಗುವಂತೆ ಆರೋಪಿ ಶಿವು ಹೊಡೆದಿದ್ದ ಎನ್ನಲಾಗಿದೆ. ಗ್ರಾಮದ ಹಿರಿಯರು ಸೇರಿ ಇಬ್ಬರ ನಡುವೆ ರಾಜಿ ಮಾಡಿಸಿದ್ದರೂ ಸಹ ಶಾಂತಿ ಉಳಿಯಲಿಲ್ಲ.ಇಂದು ಬೆಳಿಗ್ಗೆ ಮತ್ತೆ ಏಕಾಏಕಿ ಹಲ್ಲೆ ಶಿವು ಹಲ್ಲೆ ಮಾಡಿದ. ತಲೆಗೆ ಬಲವಾಗಿ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ನಿಂಗಪ್ಪ ಸಾವನ್ನಪ್ಪಿದ. “ನಾನೇ ಕೊಲೆ ಮಾಡಿದ್ದೇನೆ” ಎಂದು ಪೊಲೀಸರ ಮುಂದೆ ಆರೋಪಿ ಶಿವು ಶರಣಾಗಿದ್ದಾನೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಅಟೋ ರಿಕ್ಷಾ ಪಲ್ಟಿ…!

ಮಂಗಳೂರು: ರಾಜ್ಯ ಮಟ್ಟದಲ್ಲಿ ಮಿಂಚಿದ ಚಿಂತನ್ ಶೆಟ್ಟಿ…!

ಚಿಕ್ಕಬಳ್ಳಾಪುರ: ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿಕೆ…!

ಕಾಸರಗೋಡು: ಸಾವಿನಲ್ಲೂ ಒಂದಾದ ಪ್ರೇಮಿಗಳು; ಭಾವಿ ಪತಿಯ ಪಕ್ಕದಲ್ಲೇ ಯುವತಿ ಅಂತ್ಯಕ್ರಿಯೆ…!

ಚೆನ್ನೈ : ಶಾಲೆ-ಧಾರ್ಮಿಕ ಕೇಂದ್ರಗಳ ಬಳಿ ಮದ್ಯದಂಗಡಿ ಬಂದ್…!

ಬಂಟ್ವಾಳ: ಬೋಸರಾಜು-ರಮಾನಾಥ ರೈ ಭೇಟಿ; ನೀರಾವರಿ ಯೋಜನೆಗಳ ಅನುದಾನಕ್ಕೆ ಮನವಿ…!

ಬಂಟ್ವಾಳ: ನೇತ್ರಾವತಿ ನೀರಿನ ಮಟ್ಟ ಕುಸಿತ; ದ.ಕ ಜಿಲ್ಲೆಯಲ್ಲಿ ಆತಂಕ…!

ಮಂಗಳೂರು: ಬಂಟರ ಮಾತೃ ಸಂಘದ ಅಧ್ಯಕ್ಷರಾಗಿ ಅಜಿತ್ ಕುಮಾರ್ ರೈ ಆಯ್ಕೆ…!

ಹೈದರಾಬಾದ್: ತೆಲುಗು ಚಿತ್ರರಂಗದ ಉದಯೋನ್ಮುಖ ನಟ ರಸ್ತೆ ಅಪಘಾತದಲ್ಲಿ ಬಲಿ…!

error: Content is protected !!