ಜನ ಮನದ ನಾಡಿ ಮಿಡಿತ

Advertisement

ಡಾ| ದೇವುದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ “ಸುಣ್ಣದ ಬೊಟ್ಟು” ನಾಟಕದ ಅಧ್ಧೂರಿ ಮುಹೂರ್ತ..!

ಕಳೆದ 30 ದಶಕಗಳಿಂದ ತುಳುರಂಗಭೂಮಿಯಲ್ಲಿ ತನ್ನದೆ ಚಾಪು ಮೂಡಿಸಿತ್ತಿರುವ ಮಂಗಳೂರಿನ ಖ್ಯಾತ ಚಾಪರ್ಕ ತಂಡದ 61ನೇ ನಾಟಕದ ಮೂಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಇಂದು ಬೆಳಗ್ಗೆ ನಡೆಯಿತು.

ಕಳೆದ 30 ದಶಕಗಳಿಂದ ಜನರಿಗೆ ಹಾಸ್ಯದೊಂದಿಗೆ ಸಾಮಾಜಿಕ ಕಳಕಳಿಯ ನಾಟಗಳನ್ನು ನಿರಂತರವಾಗಿ ನೀಡಿದ ಕೀರ್ತಿ ಚಾ ಪರ್ಕ ತಂಡದ ರೂವಾರಿ ತೆಲಿಕೆದ ಬೊಳ್ಳಿ ಡಾ| ದೇವುದಾಸ್ ಕಾಪಿಕಾಡ್ ರವರಿಗೆ ಸಲ್ಲುತ್ತದೆ. ಈ ಬಾರಿಯೂ ವಿಭಿನ್ನ ಕಥಾಹಂದರವನ್ನು ಹೊಂದಿರುವ ನೂತನ ನಾಟಕ “ಸುಣ್ಣದ ಬೊಟ್ಟು” ಮೂಲಕ ಕಲಾಪ್ರೇಕ್ಷಕರಿಗೆ ರಸದೌತಣ ನೀಡಲು ತಯಾರಿಯಲ್ಲಿದ್ದಾರೆ.

 

ಶ್ರೀಮತಿ ಶರ್ಮಿಳಾ ಕಾಪಿಕಾಡ್ ನಿರ್ಮಾಣದಲ್ಲಿ ಡಾ| ದೇವುದಾಸ್ ಕಾಪಿಕಾಡ್ ರಚಿಸಿ ನಿರ್ದೇಶಿಸುವ “ಸುಣ್ಣದ ಬೊಟ್ಟು” ನಾಟಕದ ಸಂಗೀತದ ಹೊಣೆಯನ್ನು ಗುರು ಬಾಯಾರ್ ಹೊರಲಿದ್ದಾರೆ. ಇನ್ನು ಕಲಾವಿದರಾಗಿ ಸಾಯಿ ಕೃಷ್ಣ, ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಪಾಂಡುರಂಗ ಅಡ್ಯಾರ್, ಪ್ರಕಾಶ್ ಶೆಟ್ಟಿ ಧರ್ಮನಗರ, ಪ್ರವೀಣ್ ಬಿ.ಸಿ ರೋಡ್ ಸಾಯಿ ಚೇತನ್, ತಿಲಕ್ ರಾಜ್ ಕೊಯಿಲಾ, ನಿತಿನ್ ಹೊಸಂಗಡಿ, ಸಚ್ಚಿನ್ ಅರ್ಕುಳ, ಸುಜಾತ ಶಕ್ತಿನಗರ, ಚೈತ್ರ ಕಲ್ಲಡ್ಕ, ಹರ್ಷಿಣಿ ಪೂಜಾರಿ ಅಭಿನಯಿಸಲಿದ್ದಾರೆ. ತಾಂತ್ರಿಕ ವರ್ಗದಲ್ಲಿ ರಾಜೇಶ್ ಮಂಜೇಶ್ವರ, ರಮಾನಂದ ಸಜಿಪ, ಶ್ರವಣ್ ಬಿ.ಸಿ ರೋಡ್, ಪ್ರಸನ್ನ ಬೋಳಾರ್, ಅಶಿಕ್ ಉಡುಪಿ ಕಾರ್ಯ ನಿರ್ವಹಿಸಲಿದ್ದಾರೆ. ಮಂಗಳೂರಿನ ಪುರಭವನದಲ್ಲಿ ಸೆಪ್ಟೆಂಬರ್‌ನಲ್ಲಿ ಅದ್ದೂರಿ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಚಾ ಪರ್ಕ ತಂಡದ “ಸುಣ್ಣದ ಬೊಟ್ಟು” ರೆಡಿಯಾಗಲಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!