ಜನ ಮನದ ನಾಡಿ ಮಿಡಿತ

Advertisement

ಗಟ್ಟಿಮೇಳವನ್ನ ಹಿಂದಿಕ್ಕಿದ ಸೀತಾರಾಮ ಜೋಡಿ..!

ಕನ್ನಡ ಕಿರುತೆರೆಯ ಅಗ್ನಿ ಪರೀಕ್ಷೆಯ ದಿನ ಅಂದ್ರೆ, ಗುರುವಾರ. ಈ ವಾರ ಜನ ಯಾರ ಕೈ ಹಿಡಿದ್ರು?ಯಾರ ಕೈನ ಬಿಟರು? ಯಾರು ರೇಸ್​​ನಿಂದ ಆಚೆ ಉಳಿದಿದ್ದಾರೆ? ಯಾರು ರೇಸ್​ನಲ್ಲಿದ್ದಾರೆ ಇದ್ದೆಲ್ಲದಕ್ಕೂ ಉತ್ತರ ಇಲ್ಲಿದೆ.

ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎಂದಿನಂತೆ ಡಬಲ್ ಡಿನಿಟ್ 11.3 ಟಿವಿಆರ್ ಪಡೆದುಕೊಂಡು ರಾರಾಜಿಸುತ್ತಾ ಇದೆ. ಇನ್ನೂ ಅಚ್ಚರಿಯಂತೆ ಹಾಗೂ ಅಂದುಕೊಂಡತೆ, ಸೀತಾ ರಾಮ ಗಟ್ಟಿಮೇಳವನ್ನ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿ ಬೀಗಿದೆ. ಹೌದು ಇಷ್ಟು ದಿನ ಗಟ್ಟಿಮೇಳ ಎರಡನೇ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ತನ್ನ ಪ್ರಬುದ್ಧತೆ ಮೆರೆದಿತ್ತು. ಆದ್ರೆ ಸೀತಾರಾಮ ಅದನ್ನ ಬಂದ ನಾಲ್ಕೇ ವಾರಕ್ಕೆ ಧೂಳಿಪಟ ಮಾಡಿದೆ. ಸೀತಾ ರಾಮನಿಗೆ ವೀಕ್ಷಕರು 8.9ಟಿವಿಆರ್ ನೀಡಿದ್ರೆ, ಗಟ್ಟಿಮೇಳಾಗೆ 8.8ಕೊಟ್ಟಿದ್ದಾರೆ.

ಇನ್ನೂ ಶ್ರೀರಸ್ತು ಶುಭಮಸ್ತು ಮದುವೆಯ ಎಪಿಸೋಡ್ಸ್​ಗಳಿಗೆ ವೀಕ್ಷಕರು ಶರಣಾಗಿದ್ದಾರೆ. ಈ ಬಾರಿ ನಾಲ್ಕನೆ ಸ್ಥಾನದಲ್ಲಿ 7.9 ಟಿವಿಆರ್ ಪಡೆದು ಮಾಧವ-ತುಳಸಿ ನಂಟು ಬಿಗಿಯಾಗಿದೆ. ಇನ್ನೂ ಐದನೇ ಸ್ಥಾನದಲ್ಲಿ 7.6 ಟಿವಿಆರ್ ಪಡೆದು ಗೌತಮ್ -ಭೂಮಿಕ ಎಲ್ಲರನ್ನ ರಂಜಿಸ್ತಾ ಇದ್ದಾರೆ.ಈ ಬಾರಿ ಟಾಪ್ ಐದು ಸ್ಥಾನವನ್ನ ಅಲಂಕರಿಸಿದ್ದು ಜೀವಾಹಿನಿಯ ಕತೆಗಳೇ.

ಕಲರ್ಸ್​ ವಾಹಿನಿಯಲ್ಲಿ ಸದ್ಯ ಲಕ್ಷ್ಮೀ ಬಾರಮ್ಮ ಕತೆಗೆ ಜನ ಒತ್ತು ಕೊಡ್ತಿದ್ದಾರೆ. 6.8 ಟಿವಿಆರ್ ಪಡೆದುಕೊಂಡು ಎಲ್ಲರನ್ನ ರಂಜಿಸ್ತಾ ಬಂದಿದೆ. ಇನ್ನೂ ರಾಮಾಚಾರಿ ವಾರದಿಂದ ವಾರಕ್ಕೆ ಅಗ್ನಿಪರೀಕ್ಷೆ ಎದುರಿಸ್ತಾ ಇದೆ. ಇತ್ತ ಸೈಕಲ್ ಗ್ಯಾಪ್​ನಲ್ಲಿ ಗೀತಾ 5.9 ಟಿವಿಆರ್ ಪಡೆದು ಭಾಗ್ಯಲಕ್ಷ್ಮೀಯನ್ನೆ ಹಿಂದಿಕ್ಕಿದೆ. ಒಟ್ಟಿನಲ್ಲಿ ಟಿಆರ್​ಪಿ ಲಿಸ್ಟ್ ಹೊರ ಬಿದ್ದಿದ್ದು, ಈ ವಾರದ ಸೀರಿಯಲ್​ಗಳ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ.

Leave a Reply

Your email address will not be published. Required fields are marked *

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

ಮಂಗಳೂರು: ಅಕ್ರಮ ಆನೆದಂತಗಳ ಮಾರಾಟ; ಆರೋಪಿಗಳ ಬಂಧನ..!

ಬೆಂಗಳೂರು: ಕಾರ್ಕಳದಲ್ಲಿ ತುಳು ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸುವಂತೆ ಮನವಿ..!

ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಮೃತ್ಯು…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಭೇಟಿ…!

error: Content is protected !!