ಜನ ಮನದ ನಾಡಿ ಮಿಡಿತ

Advertisement

ಬರೋಬ್ಬರಿ 174 ಕಿ.ಮೀ ರಿವರ್ಸ್ ಟ್ರ‍್ಯಾಕ್ಟರ್ ಓಡಿಸಿದ ಯುವಕ; ಭಕ್ತಿ ಅಂದರೆ ಇದಪ್ಪಾ ಶಹಬ್ಬಾಷ್.. ಎಂದ ನೆಟ್ಟಿಗರು

ಸಾಮಾನ್ಯವಾಗಿ ಭಕ್ತರು ದೇವರಿಗೆ ಹಲವು ರೀತಿಯಲ್ಲಿ ಹರಕೆ ಕಟ್ಟಿಕೊಂಡಿರುತ್ತಾರೆ. ಕೆಲವರು ಹಣದ ರೂಪದಲ್ಲಿ ಕೊಟ್ಟರೆ, ಇನ್ನು ಕೆಲವರು ದವಸ-ಧಾನ್ಯ ರೂಪದಲ್ಲಿ ಹರಕೆ ನೀಡುತ್ತಾರೆ. ಆದರೆ ಇಲ್ಲೊಬ್ಬ ಯುವಕ ದೇವರಿಗೆ ರಿವರ್ಸ್ ಟ್ರ‍್ಯಾಕ್ಟರ್ ಓಡಿಸುವ ಹರಕೆ ಕಟ್ಟಿಕೊಂಡಿದ್ದು, ಇದೀಗ ಅದರಂತೆಯೇ ಈ ಹರಕೆಯನ್ನು ಮಾಡಿ ತೀರಿಸಿದ್ದಾನೆ.

ಹೌದು. 25 ವರ್ಷದ ಶಿವನಗೌಡ ಪಾಟೀಲ್ ಎಂಬ ಯುವಕ ಉಳುವಿ ಚನ್ನಬಸವೇಶ್ವರ ದೇವರಿಗೆ ಹರಕೆ ಐದು ವರ್ಷದ ಹಿಂದೆಯೇ ಈ ಹರಕೆಯನ್ನು ಕಟ್ಟಿಕೊಂಡಿದ್ದನು. ಅದರಂತೆಯೇ ನಿನ್ನೆ ದೇವರಿಗೆ ಹರಕೆ ಈಡೇರಿಸಿದ್ದಾನೆ.
16 ತಾಸಿನಲ್ಲಿ 174 ಕಿಮೀ ರಿವರ್ಸ್ ಟ್ರ‍್ಯಾಕ್ಟರ್ ಚಲಾಯಿಸುವ ಮೂಲಕಜ ಎಲ್ಲರನ್ನು ಬೆರಗುಗೊಳಿಸಿದ್ದಾನೆ.

ಶಿವನಗೌಡ ಪಾಟೀಲ್ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕನ್ನೂರು ಗ್ರಾಮದಿಂದ ಉಳುವಿಗೆ ರಿವರ್ಸ್ ಟ್ರ‍್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದಾನೆ. ಹಗಲು ರಾತ್ರಿ ಎನ್ನದ ಸತತವಾಗಿ ಹಿಂಬದಿಯಿAದ ಡ್ರೈವಿಂಗ್ ಮಾಡಿ ಸಾಹಸ ಮೆರೆದಿದ್ದಾನೆ.

ಟ್ರ‍್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟಕರ ಅಂತದ್ರಲ್ಲಿ ಟೇಲರ್ ಸಮೇತ ಪ್ರಯಾಣ ಮಾಡಿದ್ದಾನೆ. ಯುವಕನ ಈ ದಿಟ್ಟ ಸಾಹಸಕ್ಕೆ ಊರಿನ ಹಾಗೂ ತಾಲೂಕಿನ ಜನರು ಫಿದಾ ಆಗಿದ್ದಾರೆ. ಶಹಬ್ಬಾಷ್ ಇದಪ್ಪಾ ಭಕ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!