ಜನ ಮನದ ನಾಡಿ ಮಿಡಿತ

Advertisement

ಹಿಂದೂ ಸಮಾಜವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ; ಡಾ. ಪ್ರಭಾಕರ್ ಭಟ್

ಬಂಟ್ವಾಳ : ಹಿಂದೂ ಸಮಾಜವನ್ನು ಕೆಣಕಿದರೆ ಸುಮ್ಮನಿರುವುದಿಲ್ಲ, ಹಿಂದೂ ಸಮಾಜದ ಮಹಾಪುರುಷರಿಗೆ ಅಪಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಆರ್.ಎಸ್.ಎಸ್.ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಹೇಳಿದರು.
ಅವರು ಸ್ವಾತಂತ್ರ್ಯ ವೀರ ದಾಮೋದರ ಸಾವರ್ಕರ್ ಅವಮಾನವನ್ನು ಖಂಡಿಸಿ ವಿಶ್ವಹಿಂದೂ‌ಪರಿಷತ್ ಬಜರಂಗಳ ಮಂಚಿ ಘಟಕ ಮತ್ತು ಮಾತೃಶಕ್ತಿ,ದುರ್ಗವಾಹಿನಿ ಮಂಚಿ ಘಟಕದ ವತಿಯಿಂದ ಮಂಚಿ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ನಡೆದ ಹಿಂದೂ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.

ಹಿಂದೂ ಸಮಾಜ ಕ್ಷಣಕ್ಷಣವೂ ಎಚ್ಚರದಿಂದರಬೇಕು. ಲವ್ ಜಿಹಾದ್ ನಂತಹ ಮೋಸದ ಬಲೆಗೆ ಬೀಳಬಾರದು ಎಂದು ಅವರು ಎಚ್ಚರಿಸಿದರು.
ಮಹಿಳಾ ಪರ ಮಾತನಾಡುವ ರಾಜ್ಯದ ಕಾಂಗ್ರೆಸ್ ಸರಕಾರ ಮಂಚಿಯ ಶಾಲಾ ಶಿಕ್ಷಕಿಗೆ ಅನ್ಯಾಯವಾದಗ ಸೌಜನ್ಯಕ್ಕಾದರೂ ವಿಚಾರಿಸುವ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು. ಇಲ್ಲಿ ಸೌಜನ್ಯಕ್ಕೆ ಬೆಲೆಯಿಲ್ಲದಂತಾಗಿದೆ. ಹಾಗಾಗಿ ಹನ್ನೊಂದು ವರ್ಷಗಳ ಹಿಂದೆ ಅತ್ಯಾಚಾರ ಮಾಡಿ ಕೊಲೆಯಾದ ಅಮಾಯಕ ಶಾಲಾ ಬಾಲಕಿ ಸೌಜನ್ಯ ನಿಗೆ ನ್ಯಾಯಸಿಕ್ಕಿಲ್ಲ ಎಂದು ಹೇಳಿದರು.

ಪದ್ಮಾಲತನಿಂದ ಹಿಡಿದು ಸೌಜನ್ಯ ವರೆಗೆ ನಡೆದ ಸಾಲುಸಾಲು ಕೊಲೆಗಳಿಗೆ ನ್ಯಾಯಸಿಗಬೇಕಾಗಿದೆ ಎಂದು ಅವರು ಒತ್ತಿ ಹೇಳಿದರು. ದೇಶದ್ಯಾಂತ ನಡೆಯುವ ಹೋರಾಟದ ಕಿಚ್ಚು ನೋಡಿದರೆ ಸೌಜನ್ಯ ಎಂಬ ಬಾಲಕಿ ದೇವಿ ರೂಪದಿಂದ ಬಂದಿದ್ದಾಳೆ ಅಂತ ಕಾಣುತ್ತದೆ ಎಂದು ಹೇಳಿದರು. ರಾತ್ರಿಯಿಡಿ ಹುಡುಕಿದರು ಸಿಗದ ಸೌಜನ್ಯನ ಮೃತದೇಹ ಮರುದಿನ ಅದೇ ಸ್ಥಳಕ್ಕೆ ಹೇಗೆ ಬಂತು ಎಂದು ಪ್ರಶ್ನಿಸಿದರು. ಸೌಜನ್ಯ ನಿಗೆ ನ್ಯಾಯ ಸಿಕ್ಕರೆ ಇಡೀ ಮಹಿಳೆಯರಿಗೆ ನ್ಯಾಯ ಸಿಕ್ಕಂತೆ ಎಂದು ಹೇಳಿದರು.

ದೇಶದಲ್ಲಿರುವ ಲಕ್ಷ ಲಕ್ಷ ಮಸೀದಿಗಳು , ಚರ್ಚ್ ಗಳು ಹಿಂದೂಗಳ ಪವಿತ್ರ ನೆಲದಲ್ಲಿದರುವುದು ಎಂಬುದನ್ನು ನೆನಪು ಮಾಡಬೇಕಾಗಿದೆ ಎಂದು ಹೇಳಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬೈಕ್ ಚಲೋ ನಡೆಯಿತು. ಜೊತೆಗೆ ಪ್ರತಿ ಮನೆಗೆ ಸಾವರ್ಕರ್ ಪೋಟೋ ಮತ್ತು ಚರಿತ್ರೆ ಪುಸ್ತಕ ವನ್ನು ನೀಡಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕ ರಮೇಶ್ ರಾವ್ ನೂಜಿಪ್ಪಾಡಿ ವಹಿಸಿದ್ದರು.
ವೇದಿಕೆಯಲ್ಲಿ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಸಂಚಾಲಕ ಶರಣ್ ಪಂಪ್ ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಡಾ.ಕೃಷ್ಣ ಪ್ರಸನ್ನ ಪುತ್ತೂರು,ಸಚಿನ್ ಮೆಲ್ಕಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!