ಜನ ಮನದ ನಾಡಿ ಮಿಡಿತ

Advertisement

ಮಾನಸಿಕ ಖಿನ್ನತೆ: ಮಹಿಳೆ ಆತ್ಮಹತ್ಯೆ

ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡ್ ಬೈಪಾಸ್ ಬಳಿ ಮಹಿಳೆಯೊಬ್ಬರು ಪಕ್ಕದ ಮನೆಯ ಬಾವಿಗೆ ಹಾರಿ ಗುರುವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೃತ ಮಹಿಳೆಯನ್ನು ಕಾರ್ನಾಡ್ ಬೈಪಾಸ್ ಬಳಿಯ ನಿವಾಸಿ ಲಿನೆಟ್ ರಂಜಿತಾ ಸೋನ್ಸ್(34) ಎಂದು ಗುರುತಿಸಲಾಗಿದೆ.

ಮೃತ ಮಹಿಳೆ ಲಿನೆಟ್ ರಂಜಿತಾ ಸೋನ್ಸ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೆ.ಎಂ.ಸಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ರಂಜಿತಾರವರು ಕೊರೊನಾ ಬಳಿಕ ಕೆಲಸದಿಂದ ನಿವೃತ್ತಿ ಪಡೆದಿದ್ದರು.


ಗುರುವಾರ ಬೆಳಿಗ್ಗೆ ಪಕ್ಕದ ಸಂಬಂಧಿಕರ ಮನೆಗೆ ತೆರಳಿದ್ದ ಅವರು ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಮನೆಗೆ ವಾಪಸಾಗಿದ್ದರು. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಪತಿ ಜೀವನ್ ರವರು ಅಕ್ಟೋಬರ್ ಒಂದರಂದು ವಾಪಸಾಗಿದ್ದು ಘಟನೆ ಸಂದರ್ಭ ಮನೆಯಲ್ಲಿದ್ದರು. ಮನೆಯವರು ರಂಜಿತಾರನ್ನು ಸಮಾಧಾನ ಪಡಿಸುತ್ತಿದ್ದಾಗಲೇ ಏಕಾಏಕಿ ಮನೆ ಹೊರಗಡೆ ಓಡಿಹೋಗಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಬಾವಿಗೆ ಹಾರಿದ್ದರು. ಹಿಂದೆಯೇ ಓಡಿಹೋದ ಪತಿ ಜೀವನ್ ಕೊನೇ ಕ್ಷಣದಲ್ಲಿ ರಕ್ಷಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.


ತಕ್ಷಣ ಕದ್ರಿ ಅಗ್ನಿಶಾಮಕ ದಳಕ್ಕೆ ಕರೆಸಿ ಪರಿಶಿಲಿಸಿದಾಗ ಫಲಕಾರಿಯಾಗದೆ ಮೃತಪಟ್ಟಿದ್ದರು. 65 ಅಡಿ ಆಳದ ಬಾವಿಯಲ್ಲಿ ಸುಮಾರು 23 ಅಡಿ ನೀರಿತ್ತು. ವಿವಿಧ ಪ್ರಯತ್ನ ನಡೆಸಿದರೂ ಆಕೆಯ ಶವ ಮೇಲೆತ್ತಲು ಅಸಾಧ್ಯವಾಗಿ ಅಗ್ನಿಶಾಮಕ ದಳದ ಸುರೇಶ್ ಶೆಟ್ಟ ಎಂಬವರು ಬಾವಿಗಿಳಿದು ನೀರಿನಲ್ಲಿ ಮುಳುಗಿ ಸುಮಾರು ಒಂದು ಗಂಟೆ ಹುಡುಕಾಡಿದ ಬಳಿಕ ಬಾವಿ ಅಡಿಭಾಗದಲ್ಲಿ ರಂಜಿತಾ ಶವ ಪತ್ತೆಯಾಗಿತ್ತು. ಈತನ್ಮಧ್ಯೆ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೆ ಕರೆ ಮಾಡಿ ಕರೆಸಲಾಗಿತ್ತು. ಅವರು ಉಚ್ಚಿಲ ತಲುಪುವಷ್ಟರಲ್ಲಿ ಸುರೇಶ್ ಶೆಟ್ಟಿಯವರು ಶವವನ್ನು ಮೇಲಕ್ಕೆತ್ತಿದ್ದರು.


ಕಾಪು ಪಾಂಗಾಳ ಉಳಿಯಾರಗೋಳಿ ಡೇವಿಡ್ ಸೋನ್ಸ್ರವರ ಪುತ್ರಿಯಾಗಿರುವ ರಂಜಿತಾರವರು ಪತಿಯ ಮನೆಯಲ್ಲಿ ಅತ್ತೆ ಮಾವನ ಜತೆ ವಾಸವಿದ್ದರು. ಸದಾ ಏಕಾಂತ ಬಯಸುವ ಅವರು ಯಾರೊಂದಿಗೂ ಹೆಚ್ಚಾಗಿ ಬೆರೆಯುತ್ತಿರಲಿಲ್ಲ. ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!