ಬಜಪೆ: ಕಳೆದ 26 ವರ್ಷಗಳಿಂದ ವಿವಿಧಾಕೃತಿಯ ಗೂಡುದೀಪ ನಿರ್ಮಿಸುತ್ತ ಬಂದಿರುವ ಬಜಪೆ ಸಮೀಪದ ಪಡುಪೆರಾರದ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ನಾಗಬ್ರಹ್ಮ ಯುವಕ ಮಂಡಲವು ಸುಮಾರು 40 ಕ್ಕೂ ಹೆಚ್ಚು ಕಾರ್ಯಕರ್ತರ ಪರಿಶ್ರಮ ದಿಂದ ಈ ಬಾರಿಯ ದೀಪಾವಳಿ ಹಬ್ಬಕ್ಕೆ 27 ನೇ ವರ್ಷದ ಗೂಡುದೀಪವಾಗಿ 150 ಕೆಜಿ ಭಾರದ 27 ಫೀಟ್ ಉದ್ದ ಹಾಗೂ 7 ಫೀಟ್ ಅಗಲದ ಚಂದ್ರಯಾನ 3 ಮಾದರಿಯ ಬೃಹತ್ ಗೂಡುದೀಪ ನಿರ್ಮಾಣ ಮಾಡಿದ್ದಾರೆ.

ಇಸ್ರೋ ವಿಜ್ಞಾನಿಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ 2024 ರಲ್ಲಿ ಪ್ರಧಾನಿಯಾಗಲೆಂದು ಸಂದೇಶ ನೀಡಿದ್ದಾರೆ.

ಗೂಡುದೀಪ ಉದ್ಘಾಟನೆ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಬಲಾವಂಡಿ ದೈವದ ಮುಕ್ಕಾಲ್ದಿ ಬಾಲಕೃಷ್ಣ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಯಂತ್ ಕಟ್ಟಸ್ಥಾನ, ಪುರುಷೋತ್ತಮ್ ಮಳಲಿ, ಕೃಷ್ಣ ಕಜೆಪದವು, ರಾಜೇಶ್ ಗಂಜಿಮಠ, ಪಡುಪೆರಾರ ಗ್ರಾಮ ಪಂಚಾಯತ್ ನ ಸದಸ್ಯರುಗಳು , ಶ್ರೀ ನಾಗ ಬ್ರಹ್ಮ ಯುವಕ ಮಂಡಲದ ಅಧ್ಯಕ್ಷ ಶೇಖರ್ ಸಪಳಿಗ, ಗೌರವ ಅಧ್ಯಕ್ಷರು, ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.






