ಜನ ಮನದ ನಾಡಿ ಮಿಡಿತ

Advertisement

ಉಡುಪಿಯ ನಾಲ್ವರ ಹತ್ಯಾಕಾಂಡ ; ಬಗೆದಷ್ಟು ಬಯಲಾಗ್ತಿದೆ ಕಿರಾತಕನ ಕ್ರೌರ್ಯ

 ಒಂದೇ ಮನೆಯಲ್ಲಿ ನಾಲ್ವರ ಹತ್ಯಾಕಾಂಡ ನಡೆದಿದ್ದ ರಕ್ತಪಾತ ಬೆಚ್ಚಿ ಬೀಳಿಸಿದೆ. ಗಗನಸಖಿ ಅಯ್ನಾಸ್‌ಳನ್ನು ಬರ್ಬರವಾಗಿ ಹತ್ಯೆ ಮಾಡಿದ ಕಿರಾತಕನ ಕ್ರೌರ್ಯ ಬಗೆದಷ್ಟು ಬಯಲಾಗ್ತಿದೆ. ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ ಪ್ರವೀಣ ಚೌಗಲೆ ತಾನು ಯಾರು? ಅಯ್ನಾಸ್‌ಳನ್ನು ಕೊಲೆ ಮಾಡಲು ಕಾರಣವೇನು ಅನ್ನೋ ಸ್ಫೋಟಕ ಸಂಗತಿಗಳನ್ನ ಬಾಯ್ಬಿಟ್ಟಿದ್ದಾನೆ.

ಆರೋಪಿ ಪ್ರವೀಣ ಚೌಗಲೆ ಏರ್‌ ಇಂಡಿಯಾ ವಿಮಾನದಲ್ಲಿ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ. ಕ್ಯಾಬಿನ್ ಕ್ರ್ಯೂ ಅಂದ್ರೆ ವಿಮಾನ ಹತ್ತಿದ ಮೇಲೆ ಪ್ರಯಾಣಿಕರು ವಿವರಣೆ ನೀಡೋ ಕಾರ್ಯ. ಇದೇ ವಿಮಾನದಲ್ಲಿ ಸಹೋದ್ಯೋಗಿಯಾಗಿದ್ದು ಗಗನಸಖಿ ಅಯ್ನಾಸ್‌. ಅಯ್ನಾಸ್‌ ಅಂದ್ರೆ ಪ್ರವೀಣ್ ಅದೆಷ್ಟು ಇಷ್ಟ ಪಡುತ್ತಿದ್ದ ಅಂದ್ರೆ, ಅಯ್ನಾಸ್ ಮೊಬೈಲ್ ನಂಬರ್ ಬ್ಲಾಕ್ ಮಾಡಿದ್ದಕ್ಕೆ ಪ್ರವೀಣ್ ಚೌಗಲೆ ಹುಚ್ಚನಂತಾಗಿದ್ದ.

ಅಯ್ನಾಸ್ ತನ್ನಿಂದ ದೂರ ಮಾಡಿದ್ದಕ್ಕೆ ಕೋಪಗೊಂಡ ಪ್ರವೀಣ್ ಕೊಲೆ ಮಾಡಲು ನಿರ್ಧರಿಸಿದ್ದ. ಈತನ ಉದ್ದೇಶ ಅಯ್ನಾಸ್ ಒಬ್ಬಳನ್ನೇ ಕೊಲೆ ಮಾಡುವುದಾಗಿತ್ತು. ಆದರೆ, ಸಾಕ್ಷ್ಯ ನಾಶದ ಕಾರಣಕ್ಕೆ ಅಯ್ನಾಸ್ ಜೊತೆಗಿದ್ದ ಅಮ್ಮ, ತಮ್ಮ, ತಂಗಿಯನ್ನು ಹತ್ಯೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪ್ರವೀಣ್ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದಿಷ್ಟೇ ಅಲ್ಲ ಎಲ್ಲಾ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಹಂತಕ ಪ್ರವೀಣ್ ಕೊಲೆ ಮಾಡೋದಕ್ಕೂ ಮೊದಲೇ ಅಯ್ನಾಸ್ ಮನೆಗೆ ಬಂದು ಹೋಗಿರುವ ಶಂಕೆ ವ್ಯಕ್ತವಾಗಿದೆ. ಉಡುಪಿ ಪೊಲೀಸರು ಪ್ರವೀಣ್ ಹೆಜ್ಜೆ ಗುರುತನ್ನೇ ಹಿಂಬಾಲಿಸಿಕೊಂಡು ಹೋಗಿ ಬಂಧಿಸಿದ್ದಾರೆ.

Leave a Reply

Your email address will not be published. Required fields are marked *

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

error: Content is protected !!