ಮುಲ್ಕಿ:ಕೆನರಾ ಬ್ಯಾಂಕ್ನ ಸ್ಥಾಪಕರಾದ ಅಮ್ನೆಂಬಳ ಸುಬ್ಬರಾವ್ ಅವರ 118ನೇ ಜನ್ಮದಿನ ಆಚರಣೆ ಮುಲ್ಕಿಯ ಕೆನರಾ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಕೆನರಾ ಬ್ಯಾಂಕ್ ಪ್ರಬಂಧಕರಾದ ಅತುಲ್ ಮೋಹನ್ ವಹಿಸಿದ್ರು. ಇನ್ನೂ ಇದೇ ವೇಳೆ ಮುಲ್ಕಿ ಸಭಾ ಗೃಹ ಸಮಿತಿ ಅಧ್ಯಕ್ಷರಾದ ವಿಶ್ವನಾಥ ಕಾಮತ್ ಅವರು ಮಾತನಾಡಿ, ಹಿರಿಯ ಸಾಧಕರ ಸಾಧನೆಗಳನ್ನು ನೆನಪಿಸಿಕೊಂಡು ಅವರ ದಾರಿಯಲ್ಲಿ ನಾವು ಮುನ್ನಡೆದು ಸಾಧಕರಾಗಬೇಕಾಗಿದೆ ಅಂತ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನದ ಗೌರವಾರ್ಪಣೆ ನಡೆದಿದ್ದು, ಬಳಿಕ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಕೂಡ ನಡೆದಿದೆ.



