ಇಸ್ಕಾನ್ ಪಿವಿಎಸ್ ಕಲಾಕುಂಜದ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ 24 ದಿನದ ಕಾರ್ತೀಕ ದಾಮೋದರ ದೀಪೋತ್ಸವ ಕಾರ್ಯಕ್ರಮ ಸಂಪನ್ನಗೊoಡಿದೆ.


ಅಕ್ಟೋಬರ್ 28 ರಂದು ಆರಂಭಗೊAಡ ಈ ಕಾರ್ಯಕ್ರಮವು ನವೆಂಬರ್ 27 ವರೆಗೆ ನಡೆಯಲಿದೆ. ವೈದಿಕ ವಿಧಿವಿಧಾನಗಳ ಮೂಲಕ ಪೂಜಾ ಕೈಂಕರ್ಯಗಳು ನಡೆದಿದ್ದು, ಶ್ರೀ ಕೃಷ್ಣ, ಬಲರಾಮರ ಪ್ರತಿಮೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಕಾರ್ತಿಕ ಮಾಸದ ಸಮಯದಲ್ಲಿ ಶ್ರೀಕೃಷ್ಣನಿಗೆ ತುಪ್ಪದ ದೀಪವನ್ನು ಅರ್ಪಿಸುವ ವ್ಯಕ್ತಿಯು ಯಾವುದೇ ದುಃಖಗಳಿಲ್ಲದ ಶಾಶ್ವತ ಆಧ್ಯಾತ್ಮಿಕ ಪ್ರಪಂಚವನ್ನು ಪಡೆಯುತ್ತಾನೆ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಮಂದಿರಕ್ಕೆ ಬಂದು ಶ್ರೀ ಕೃಷ್ಣನಿಗೆ ತುಪ್ಪದ ದೀಪವನ್ನ ಬೆಳಗಿದ್ದಾರೆ. ಈ ಸಂದರ್ಭದಲ್ಲಿ ಅಭಿಮತ ವಾಹಿನಿಯ ಮುಖ್ಯಸ್ಥೆ ಡಾ. ಶ್ರೀಮತಿ ಮಮತಾ ಪಿ ಶೆಟ್ಟಿ ಅವರು ಭಾಗಿಯಾಗಿ ದೇವರಿಗೆ ದೀಪ ಬೆಳಗಿಸಿ ಪ್ರಾರ್ಥಿಸಿದ್ದಾರೆ. ಇನ್ನೂ ಮಂದಿರದಲ್ಲಿ ಹರೇ ರಾಮ ಹರೇ ಕೃಷ್ಣ ಮಂತ್ರ ಪಠನೆ ನೂರಾರು ಧ್ವನಿಗಳಲ್ಲಿ ಮೊಳಗುವುದರ ಜೊತೆಗೆ ಸಾವಿರಾರು ದೀಪಗಳು ಕಂಗೊಳಿಸಿದೆ.



