ಮುಲ್ಕಿ: ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 2023-24ನೇ ಸಾಲಿನ ಮಕ್ಕಳ ಹಕ್ಕು ವಿಶೇಷ ಗ್ರಾಮ ಸಭೆ ಶುಕ್ರವಾರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಪಡುಪಣಂಬೂರು ಶಾಲಾ ವಿದ್ಯಾರ್ಥಿ ನಾಯಕಿ ಪೂರ್ಣಿಮಾ ವಹಿಸಿದ್ದರು.
ಸಭೆಯಲ್ಲಿ ಮಕ್ಕಳ ಹಕ್ಕುಗಳು ಮಾಸೋತ್ಸವ ಸಮಿತಿಯ ದ.ಕ.ಜಿಲ್ಲಾ ಸಂಚಾಲಕಿ ನಂದ ಪಾಯಸ್ ಮಾತನಾಡಿ ಮಕ್ಕಳ ಮೇಲಿನ ದೌರ್ಜನ್ಯ , ಬಾಲ್ಯ ವಿವಾಹ ಬಾಲ್ಯ ಕಾರ್ಮಿಕತೆ, ತಡೆಗಟ್ಟುವುದೇ ಅಲ್ಲದೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕೆಲಸ ಆಗಬೇಕು ಎಂದರು.

ಸಿ.ಆರ್. ಪಿ. ಜ್ಯೋತಿ ಮಾತನಾಡಿ ಮಕ್ಕಳು ಮೊಬೈಲ್ ಬದಿಗಿಡಿ ಶಿಕ್ಷಣಕ್ಕೆ ಒತ್ತು ನೀಡಿ ಎಂದರು. ಪಂಚಾಯತ್ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಉಪಾಧ್ಯಕ್ಷ ಹೇಮನಾಥ ಅಮೀನ್, ಸದಸ್ಯರಾದ ವಿನೋದ್ ಸಾಲ್ಯಾನ್,ಅಭಿವೃದ್ದಿ ಅಧಿಕಾರಿ ಸುಧೀರ್, ಕಾರ್ಯದರ್ಶಿ ಸುಜಾತ ಎಸ್, ಅಂಗನವಾಡಿ ಸೂಪರ್ವೈಸರ್ ಸುಲೋಚನ, ಆರೋಗ್ಯ ಇಲಾಖೆಯ ಮಾರ್ಗರೇಟ್ ಸುದರ್ಶಿನಿ ಮತ್ತಿತರರು ಉಪಸ್ಥಿತರಿದ್ದು ಮಕ್ಕಳ ಸಮಸ್ಯೆಗಳ ಪ್ರಶ್ನೆಗಳಿಗೆ ಉತ್ತರಿಸಿದರು. ರಾಮಣ್ಣ ಶೆಟ್ಟಿ ಶಾಲೆಯ ಕುಮಾರಿ ಸಾನ್ವಿ ಸ್ವಾಗತಿಸಿದರು, ಕೆರೆಕಾಡು ಶಾಲೆಯ ರಂಜಿತ್ ನಿರೂಪಿಸಿದರು.









