ಜನ ಮನದ ನಾಡಿ ಮಿಡಿತ

Advertisement

ಡಿಸೆಂಬರ್ .03 ಆಳ್ವಾಸ್ ನಲ್ಲಿ ನಾಯಿಮರಿ ನಾಟಕ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.)ಮೂಡುಬಿದ್ರೆ ಆಶ್ರಯದಲ್ಲಿ
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಕಲಾವಿದರು ಅಭಿನಯಿಸುವ ನಾಯಿಮರಿ ನಾಟಕ ಪ್ರದರ್ಶನವನ್ನು ಡಿ.03 ರಂದು ಸಂಜೆ 6.30 ಕ್ಕೆ ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ.


ಈಗಾಗಲೇ ರಾಜ್ಯಾದ್ಯಂತ 50 ಕ್ಕಿಂತಲೂ ಹೆಚ್ಚು ಪ್ರದರ್ಶನ ಕಂಡ ಆಳ್ವಾಸ್ ಅಭಿನಯದ ಈ ಪ್ರಸಿದ್ದ ಮಕ್ಕಳ ನಾಟಕವನ್ನು ಕನ್ನಡದ ಖ್ಯಾತ ಲೇಖಕಿ ಶ್ರೀಮತಿ ವೈದೇಹಿಯವರು ರಚಿಸಿದ್ದಾರೆ. ರಂಗಮಾಂತ್ರಿಕ ಡಾ.ಜೀವನ್ ರಾಂ ಸುಳ್ಯ ರವರು ನಿರ್ದೇಶಿಸಿದ್ದಾರೆ. ಮಾ| ಮನುಜ ನೇಹಿಗ, ಸುಮನಾ ಪ್ರಸಾದ್ , ಸತ್ಯಜಿತ್ ಹಾಗೂ ಗೀತಂ ಗಿರೀಶ್ ಸಂಗೀತ ನೀಡಿದ್ದಾರೆ.


ಸರಳವಾದ ಅಷ್ಟೇ ರಂಜನೀಯ ಅಂಶಗಳಿಂದ ಕೂಡಿದ ಈ ನಾಯಿಮರಿ ನಾಟಕವು ಸಮರ್ಥ ನಿರ್ದೇಶನ, ನವಿರು ಹಾಸ್ಯ, ಪರಿಣಾಮಕಾರಿ ಅಭಿನಯ, ಸುಶ್ರಾವ್ಯ ಸಂಗೀತ, ಉತ್ತಮ ರಂಗ ಸಜ್ಜಿಕೆ ಮತ್ತು ಬೆಳಕು ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಪ್ರತಿಕ್ಷಣವೂ ಹಿಡಿದಿಟ್ಟುಕೊಳ್ಳುವಂತಹ ಪ್ರಯೋಗವಾಗಿದೆ.
ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಂದೇಶ ಸಾರುವ ಈ ನಾಟಕವು ಪ್ರತಿಯೊಬ್ಬ ಮಕ್ಕಳೂ ನೋಡಬೇಕಾದ ಪ್ರಯೋಗವಾಗಿದೆ.ಯಾವುದೇ ಸಭಾ ಕಾರ್ಯಕ್ರಮವಿಲ್ಲದೆ ನೇರವಾಗಿ 6.30 ಕ್ಕೆ ನಾಟಕ ಆರಂಭವಾಗುತ್ತದೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

error: Content is protected !!