ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: 550 ಟಿವಿ ಚಾನೆಲ್ ಸಹಿತ ಜಿಯೋ ಫೈಬರ್ ಮುಲ್ಕಿಯಲ್ಲಿ ಲೋಕಾರ್ಪಣೆ; ದ.ಕ.ಜಿಲ್ಲೆಯಲ್ಲಿ ಜಿಯೋ ಫೈಬರ್ ದ್ವಿತೀಯ ಕೇಂದ್ರ…

ಮುಲ್ಕಿ: 550ಕ್ಕೂ ಮಿಕ್ಕಿ ಚಾನೆಲ್ ಗಳಿರುವ, ಅತಿ ಹೆಚ್ಚು ವೇಗದ ಇಂಟರ್ನೆಟ್ ಹೊಂದಿರುವ, 14ಕ್ಕೂ ಮಿಕ್ಕಿ ಒಟಿ ಟಿ ಅಪ್ಲಿಕೇಶನ್ ಸೌಲಭ್ಯದ ಹಾಗೂ ಅನ್ ಲಿಮಿಟೆಡ್ ಲ್ಯಾಂಡ್ ಲೈನ್ ಕರೆಗಳಿರುವ ಸೌಲಭ್ಯದ ಜಿಯೋ ಫೈಬರ್ ಡಿ. 6ರಂದು ಮುಲ್ಕಿಯ ಪ್ರಕಾಶ್ ಭವನದಲ್ಲಿರುವ ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನಲ್ಲಿ ಲೋಕಾರ್ಪಣೆಗೊಂಡಿತು.

ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಶ್ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಜಿಯೋ ಫೈಬರ್ ಲೋಕಾರ್ಪಣೆಗೊಳಿಸಿ ಮಾತನಾಡಿ ಮುಲ್ಕಿ ಪರಿಸರದ ಜನತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಿಯೋ ಫೈಬರ್ ಲೋಕಾರ್ಪಣೆಗೊಂಡಿದ್ದು ಗ್ರಾಹಕರು ಸದುಪಯೋಗಪಡಿಸಿಕೊಂಡು ನೆಟ್ವರ್ಕ್ ಬೆಂಬಲಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.ಮುಲ್ಕಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಜಿಯೋ ಫೈಬರ್ ಮೂಲಕ ಗ್ರಾಹಕರು , ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜಿಯೋ ಮ್ಯಾನೇಜರ್ ಹರೀಶ್ ಪಾಟಾಳಿ ಜಿಯೋ ಫೈಬರ್ ಉಪಯೋಗ ಹಾಗೂ ಸಬಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಲ.ಅರ್ಜುನ್ ಹಿರೇಮಠ ಕೆಎಸ್ ರಾವ್ ನಗರ, ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನ ಪಾಲುದಾರರಾದ ಸತೀಶ್ ಮುಂಚೂರು, ಸೂರಜ್ ಅಂಚನ್, ಯಜ್ಞೇಶ್, ಗಣೇಶ್, ಮ್ಯಾನೇಜರ್ ಬಾಲಕೃಷ್ಣ ಮುಂಚೂರು, ಶಿವಾನಂದ ಆರ್ ಕೆ ಮತ್ತಿತರರು ಉಪಸ್ಥಿತರಿದ್ದರು ದ.ಕ.ಜಿಲ್ಲಾ ಜಿಯೋ ಫೈಬರ್ ಪ್ರಬಂದಕ ಕಿರಣ್ ಕುಮಾರ್ ಶೆಟ್ಟಿ ಬೆಳ್ತಂಗಡಿ ನಿರೂಪಿಸಿದರು.ಮುಲ್ಕಿ ಪರಿಸರದಲ್ಲಿ ಜಿಯೋ ಫೈಬರ್ ಪ್ರಥಮ ಗ್ರಾಹಕರಾದ ಕೆ ಎಸ್ ರಾವ್ ನಗರದ ಹಿಲರಿ ಡಿ’ಸೋಜ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಜಿಯೋ ಫೈಬರ್ ಕೇಬಲ್ ಅಳವಡಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ದುಡಿದಿರುವ ಸಿಬ್ಬಂದಿಗಳನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!