ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: 550 ಟಿವಿ ಚಾನೆಲ್ ಸಹಿತ ಜಿಯೋ ಫೈಬರ್ ಮುಲ್ಕಿಯಲ್ಲಿ ಲೋಕಾರ್ಪಣೆ; ದ.ಕ.ಜಿಲ್ಲೆಯಲ್ಲಿ ಜಿಯೋ ಫೈಬರ್ ದ್ವಿತೀಯ ಕೇಂದ್ರ…

ಮುಲ್ಕಿ: 550ಕ್ಕೂ ಮಿಕ್ಕಿ ಚಾನೆಲ್ ಗಳಿರುವ, ಅತಿ ಹೆಚ್ಚು ವೇಗದ ಇಂಟರ್ನೆಟ್ ಹೊಂದಿರುವ, 14ಕ್ಕೂ ಮಿಕ್ಕಿ ಒಟಿ ಟಿ ಅಪ್ಲಿಕೇಶನ್ ಸೌಲಭ್ಯದ ಹಾಗೂ ಅನ್ ಲಿಮಿಟೆಡ್ ಲ್ಯಾಂಡ್ ಲೈನ್ ಕರೆಗಳಿರುವ ಸೌಲಭ್ಯದ ಜಿಯೋ ಫೈಬರ್ ಡಿ. 6ರಂದು ಮುಲ್ಕಿಯ ಪ್ರಕಾಶ್ ಭವನದಲ್ಲಿರುವ ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನಲ್ಲಿ ಲೋಕಾರ್ಪಣೆಗೊಂಡಿತು.

ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಶ್ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಜಿಯೋ ಫೈಬರ್ ಲೋಕಾರ್ಪಣೆಗೊಳಿಸಿ ಮಾತನಾಡಿ ಮುಲ್ಕಿ ಪರಿಸರದ ಜನತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಿಯೋ ಫೈಬರ್ ಲೋಕಾರ್ಪಣೆಗೊಂಡಿದ್ದು ಗ್ರಾಹಕರು ಸದುಪಯೋಗಪಡಿಸಿಕೊಂಡು ನೆಟ್ವರ್ಕ್ ಬೆಂಬಲಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.ಮುಲ್ಕಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಜಿಯೋ ಫೈಬರ್ ಮೂಲಕ ಗ್ರಾಹಕರು , ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜಿಯೋ ಮ್ಯಾನೇಜರ್ ಹರೀಶ್ ಪಾಟಾಳಿ ಜಿಯೋ ಫೈಬರ್ ಉಪಯೋಗ ಹಾಗೂ ಸಬಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಲ.ಅರ್ಜುನ್ ಹಿರೇಮಠ ಕೆಎಸ್ ರಾವ್ ನಗರ, ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನ ಪಾಲುದಾರರಾದ ಸತೀಶ್ ಮುಂಚೂರು, ಸೂರಜ್ ಅಂಚನ್, ಯಜ್ಞೇಶ್, ಗಣೇಶ್, ಮ್ಯಾನೇಜರ್ ಬಾಲಕೃಷ್ಣ ಮುಂಚೂರು, ಶಿವಾನಂದ ಆರ್ ಕೆ ಮತ್ತಿತರರು ಉಪಸ್ಥಿತರಿದ್ದರು ದ.ಕ.ಜಿಲ್ಲಾ ಜಿಯೋ ಫೈಬರ್ ಪ್ರಬಂದಕ ಕಿರಣ್ ಕುಮಾರ್ ಶೆಟ್ಟಿ ಬೆಳ್ತಂಗಡಿ ನಿರೂಪಿಸಿದರು.ಮುಲ್ಕಿ ಪರಿಸರದಲ್ಲಿ ಜಿಯೋ ಫೈಬರ್ ಪ್ರಥಮ ಗ್ರಾಹಕರಾದ ಕೆ ಎಸ್ ರಾವ್ ನಗರದ ಹಿಲರಿ ಡಿ’ಸೋಜ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಜಿಯೋ ಫೈಬರ್ ಕೇಬಲ್ ಅಳವಡಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ದುಡಿದಿರುವ ಸಿಬ್ಬಂದಿಗಳನ್ನು ಗೌರವಿಸಲಾಯಿತು.

Leave a Reply

Your email address will not be published. Required fields are marked *

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

ಮಂಗಳೂರು: ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹ*ತ್ಯೆ..!

ವಿಟ್ಲ: ರಸ್ತೆ ಬದಿಯ ಮರಕ್ಕೆ ಡಿಕ್ಕಿಹೊಡೆದ ಟಿಪ್ಪರ್ ಲಾರಿ – ಇಬ್ಬರಿಗೆ ಗಾಯ..!

ಮಾಣಿ: ಮರ ಬಿದ್ದು ಟ್ರಾನ್ಸ್ ಫಾರ್ಮರ್‌ಗೆ ಹಾನಿ; ರಸ್ತೆ ಮೇಲೆ ಮರ ಸಹಿತ ಮುರಿದುಬಿದ್ದು ಸಂಚಾರ ಬಂದ್…!

ಗೋಳಿತ್ತೊಟ್ಟು: ಚಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ; ಪ್ರಯಾಣಿಕರು ಅಪಾಯದಿಂದ ಪಾರು…!

ಬಂಟ್ವಾಳ: ಭಾರೀ ಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು..!

ಉಪ್ಪಿನಂಗಡಿ: ನಕಲಿ 500 ನೋಟು ಮಾದರಿ ಮುದ್ರಣ ಪ್ರಕರಣ, 7 ಮಂದಿ ವಶ….!

error: Content is protected !!