ದಕ್ಷಿಣ ಕನ್ನಡ : ಮಂಗಳೂರು ಕ್ರೀಡಾಭಾರತಿ ಜಿಲ್ಲಾ ಮಹಿಳಾಪ್ರಮುಖ್ ಆಗಿ ಸಾಧಕಿ, ಕ್ರೀಡಾಪಟು, ಬಬಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕ್ರೀಡಾಭಾರತಿ ಮಂಗಳೂರು ವಿಭಾಗದ ಜಿಲ್ಲಾ ಬೈಠಕ್ ನಗರದ ಸಂಘನಿಕೇತನದಲ್ಲಿ ನಡೆಯಿತು ಮತ್ತು ಅಲ್ಲಿ ಆಯ್ಕೆಯನ್ನು ಘೋಷಿಸಲಾಯಿತು.
ಜಿಲ್ಲಾ ಮಹಿಳಾ ಪ್ರಮುಖ್ ಆಗಿದ್ದ ಹೇಮಪ್ರಭಾ ಲೈಲಾ ಇವರು ವೃತ್ತಿಪದೋನ್ನತಿಯಿಂದ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು ,ಅವರ ಸ್ಥಾನಕ್ಕೆ ಬಬಿತಾ ಶೆಟ್ಟಿ ಇವರ ಆಯ್ಕೆಯನ್ನು ಕ್ರೀಡಾಭಾರತಿಯ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಶೆಟ್ಟಿಯವರು ಘೋಷಿಸಿದರು. ಸಹ ಮಹಿಳಾ ಪ್ರಮುಕ್ ಆಗಿ ಸುಮಂಗಲಾ ಕೋಟ್ಯಾನ್ ಮತ್ತು ದಿವ್ಯಾ ಸುಳ್ಯ ,ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ಉಷಾರಾಣಿ, ಯೋಗ ಶಿಕ್ಷಣ ಪ್ರಮುಖ್ ಆಗಿ ಶಾಂಭವಿ ಮತ್ತು ನಿರ್ಮಲ ಆಯ್ಕೆಯಾದರು. ಉಷಾರಾಣಿ ಯವರು ಕ್ರೀಡಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮರ್ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು. ಜಿಲ್ಲಾ ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈಯವರು ಮುಂದಿನ ಕ್ರೀಡಾ ಸಮ್ಮೇಳನದ ಬಗ್ಗೆ ವಿವರಿಸಿದರು. ರಾಜ್ಯ ಕ್ರೀಡಾ ಭಾರತಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಶ್ರೀಮತಿ ಹೇಮಪ್ರಭಾ ಲೈಲಾ ಇವರನ್ನು ಜಿಲ್ಲಾ ಕ್ರೀಡಾ ಭಾರತಿಯ ಪರವಾಗಿ ಗೌರವಿಸಿ,ಅಭಿನಂದನಾ ನುಡಿಯನ್ನು ನುಡಿದರು. ರಾಜ್ಯಕ್ರೀಡಾ ಭಾರತಿಯ ಕಾರ್ಯಕಾರಿಣಿ ಸದಸ್ಯರಾದ ಭೋಜರಾಜ ಕಲ್ಲಡ್ಕ,ಜಿಲ್ಲಾ ಕ್ರೀಡಾಭಾರತಿ ಕೋಶಾಧಿಕಾರಿಗಳಾದ ಶ್ರೀ ಪ್ರೇಮನಾಥ್ ಉಳ್ಳಾಲ್,ಜೊತೆ ಕಾರ್ಯದರ್ಶಿ ಡಾ। ಕರುಣಾಕರ ಶೆಟ್ಟಿ,ಉಪಾಧ್ಯಕ್ಷರಾದ ಅನಂತ್ ಪ್ರಭು, ಎಸ್ ವಿ ಭಟ್, ಸದಾನಂದ ಪ್ರಭು, ಮಮತಾ ಅಣ್ಣಯ್ಯ ಕುಲಾಲ್, ಸುಜಾತಾ ಕೋಡಿಕಲ್, ಲೇಖನ, ಸಂಗೀತಾ ಉಪಸ್ಥಿತರಿದ್ದರು. ಜಯಶ್ರೀ ಪ್ರತಿಮ್ ವಂದಿಸಿದರು.
ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿರುವ ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳಕ್ಕೆ ತೆರಳಲು ಬಂಟ್ವಾಳದಿಂದ ಶುಕ್ರವಾರ ಎರಡು ಉಚಿತ…
ರಾಷ್ಟ್ರೀಯ ಹೆದ್ದಾರಿ 75ರ ಸುರಿಕುಮೇರು ಸಮೀಪದ ಹಿಂದೂಸ್ತಾನ್ ಪೆಟ್ರೋಲ್ ಬಂಕ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು…
ಬಿ.ಸಿ.ರೋಡ್ನ ಎನ್.ಜಿ. ಸರ್ಕಲ್ನಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.…
ಕಳೆದ ಒಂದು ವಾರದಿಂದ ನ್ಯುಮೋನಿಯಾ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುಃಖದ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು…
ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡು–ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ಗುತ್ತಿಗೆದಾರ ಸಂಸ್ಥೆಯಾದ ಕೆಎನ್ಆರ್ಸಿಎಲ್ ಕಂಪನಿಯು ಪಾಣೆಮಂಗಳೂರು ಹಳೆಯ…
ಅಮೆರಿಕದ ಸುಪ್ರೀಂ ಕೋರ್ಟ್ ಟ್ರಂಪ್ ಆಡಳಿತ ವಿಧಿಸಿದ್ದ ಹೆಚ್ಚುವರಿ ಆಮದು ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ ಬಳಿಕ, ಯುಎಸ್ ಸರ್ಕಾರ…