ಜನ ಮನದ ನಾಡಿ ಮಿಡಿತ

Advertisement

ಕ್ರೀಡಾ ಭಾರತಿ ಜಿಲ್ಲಾ ಮಹಿಳಾ ಪ್ರಮುಖ್ ಆಗಿ ಸಾಧಕಿ ಕ್ರೀಡಾಪಟು ಬಬಿತಾ ಶೆಟ್ಟಿ ಆಯ್ಕೆ

ದಕ್ಷಿಣ ಕನ್ನಡ : ಮಂಗಳೂರು ಕ್ರೀಡಾಭಾರತಿ ಜಿಲ್ಲಾ ಮಹಿಳಾಪ್ರಮುಖ್ ಆಗಿ ಸಾಧಕಿ, ಕ್ರೀಡಾಪಟು, ಬಬಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕ್ರೀಡಾಭಾರತಿ ಮಂಗಳೂರು ವಿಭಾಗದ ಜಿಲ್ಲಾ ಬೈಠಕ್ ನಗರದ ಸಂಘನಿಕೇತನದಲ್ಲಿ ನಡೆಯಿತು ಮತ್ತು ಅಲ್ಲಿ ಆಯ್ಕೆಯನ್ನು ಘೋಷಿಸಲಾಯಿತು.

ಜಿಲ್ಲಾ ಮಹಿಳಾ ಪ್ರಮುಖ್ ಆಗಿದ್ದ ಹೇಮಪ್ರಭಾ ಲೈಲಾ ಇವರು ವೃತ್ತಿಪದೋನ್ನತಿಯಿಂದ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು ,ಅವರ ಸ್ಥಾನಕ್ಕೆ ಬಬಿತಾ ಶೆಟ್ಟಿ ಇವರ ಆಯ್ಕೆಯನ್ನು ಕ್ರೀಡಾಭಾರತಿಯ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಶೆಟ್ಟಿಯವರು ಘೋಷಿಸಿದರು. ಸಹ ಮಹಿಳಾ ಪ್ರಮುಕ್ ಆಗಿ ಸುಮಂಗಲಾ ಕೋಟ್ಯಾನ್ ಮತ್ತು ದಿವ್ಯಾ ಸುಳ್ಯ ,ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ಉಷಾರಾಣಿ, ಯೋಗ ಶಿಕ್ಷಣ ಪ್ರಮುಖ್ ಆಗಿ ಶಾಂಭವಿ ಮತ್ತು ನಿರ್ಮಲ ಆಯ್ಕೆಯಾದರು. ಉಷಾರಾಣಿ ಯವರು ಕ್ರೀಡಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮರ್ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು. ಜಿಲ್ಲಾ ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈಯವರು ಮುಂದಿನ ಕ್ರೀಡಾ ಸಮ್ಮೇಳನದ ಬಗ್ಗೆ ವಿವರಿಸಿದರು. ರಾಜ್ಯ ಕ್ರೀಡಾ ಭಾರತಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಶ್ರೀಮತಿ ಹೇಮಪ್ರಭಾ ಲೈಲಾ ಇವರನ್ನು ಜಿಲ್ಲಾ ಕ್ರೀಡಾ ಭಾರತಿಯ ಪರವಾಗಿ ಗೌರವಿಸಿ,ಅಭಿನಂದನಾ ನುಡಿಯನ್ನು ನುಡಿದರು. ರಾಜ್ಯಕ್ರೀಡಾ ಭಾರತಿಯ ಕಾರ್ಯಕಾರಿಣಿ ಸದಸ್ಯರಾದ ಭೋಜರಾಜ ಕಲ್ಲಡ್ಕ,ಜಿಲ್ಲಾ ಕ್ರೀಡಾಭಾರತಿ ಕೋಶಾಧಿಕಾರಿಗಳಾದ ಶ್ರೀ ಪ್ರೇಮನಾಥ್ ಉಳ್ಳಾಲ್,ಜೊತೆ ಕಾರ್ಯದರ್ಶಿ ಡಾ। ಕರುಣಾಕರ ಶೆಟ್ಟಿ,ಉಪಾಧ್ಯಕ್ಷರಾದ ಅನಂತ್ ಪ್ರಭು, ಎಸ್ ವಿ ಭಟ್, ಸದಾನಂದ ಪ್ರಭು, ಮಮತಾ ಅಣ್ಣಯ್ಯ ಕುಲಾಲ್, ಸುಜಾತಾ ಕೋಡಿಕಲ್, ಲೇಖನ, ಸಂಗೀತಾ ಉಪಸ್ಥಿತರಿದ್ದರು. ಜಯಶ್ರೀ ಪ್ರತಿಮ್ ವಂದಿಸಿದರು.

Leave a Reply

Your email address will not be published. Required fields are marked *

ಉಡುಪಿ : ಕಾಪುವಿನಲ್ಲಿ ಭೀಕರ ಅಪಘಾತ…!

ಬಂಟ್ವಾಳ : ಸಜಿಪದಲ್ಲಿ ಭೀಕರ ಅಪಘಾತ…!

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

error: Content is protected !!