ದಕ್ಷಿಣ ಕನ್ನಡ : ಮಂಗಳೂರು ಕ್ರೀಡಾಭಾರತಿ ಜಿಲ್ಲಾ ಮಹಿಳಾಪ್ರಮುಖ್ ಆಗಿ ಸಾಧಕಿ, ಕ್ರೀಡಾಪಟು, ಬಬಿತಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಕ್ರೀಡಾಭಾರತಿ ಮಂಗಳೂರು ವಿಭಾಗದ ಜಿಲ್ಲಾ ಬೈಠಕ್ ನಗರದ ಸಂಘನಿಕೇತನದಲ್ಲಿ ನಡೆಯಿತು ಮತ್ತು ಅಲ್ಲಿ ಆಯ್ಕೆಯನ್ನು ಘೋಷಿಸಲಾಯಿತು.


ಜಿಲ್ಲಾ ಮಹಿಳಾ ಪ್ರಮುಖ್ ಆಗಿದ್ದ ಹೇಮಪ್ರಭಾ ಲೈಲಾ ಇವರು ವೃತ್ತಿಪದೋನ್ನತಿಯಿಂದ ತಮ್ಮ ಜವಾಬ್ದಾರಿಗೆ ರಾಜೀನಾಮೆ ನೀಡಿದ್ದು ,ಅವರ ಸ್ಥಾನಕ್ಕೆ ಬಬಿತಾ ಶೆಟ್ಟಿ ಇವರ ಆಯ್ಕೆಯನ್ನು ಕ್ರೀಡಾಭಾರತಿಯ ರಾಜ್ಯ ಉಪಾಧ್ಯಕ್ಷರಾದ ನಾಗರಾಜ ಶೆಟ್ಟಿಯವರು ಘೋಷಿಸಿದರು. ಸಹ ಮಹಿಳಾ ಪ್ರಮುಕ್ ಆಗಿ ಸುಮಂಗಲಾ ಕೋಟ್ಯಾನ್ ಮತ್ತು ದಿವ್ಯಾ ಸುಳ್ಯ ,ಜಿಲ್ಲಾ ಮಹಿಳಾ ಉಪಾಧ್ಯಕ್ಷರಾಗಿ ಉಷಾರಾಣಿ, ಯೋಗ ಶಿಕ್ಷಣ ಪ್ರಮುಖ್ ಆಗಿ ಶಾಂಭವಿ ಮತ್ತು ನಿರ್ಮಲ ಆಯ್ಕೆಯಾದರು. ಉಷಾರಾಣಿ ಯವರು ಕ್ರೀಡಾ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಜಿಲ್ಲಾ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮರ್ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು. ಜಿಲ್ಲಾ ಕ್ರೀಡಾ ಭಾರತೀಯ ಅಧ್ಯಕ್ಷರಾದ ಶ್ರೀ ಕಾರಿಯಪ್ಪ ರೈಯವರು ಮುಂದಿನ ಕ್ರೀಡಾ ಸಮ್ಮೇಳನದ ಬಗ್ಗೆ ವಿವರಿಸಿದರು. ರಾಜ್ಯ ಕ್ರೀಡಾ ಭಾರತಿಯ ಉಪಾಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಶ್ರೀಮತಿ ಹೇಮಪ್ರಭಾ ಲೈಲಾ ಇವರನ್ನು ಜಿಲ್ಲಾ ಕ್ರೀಡಾ ಭಾರತಿಯ ಪರವಾಗಿ ಗೌರವಿಸಿ,ಅಭಿನಂದನಾ ನುಡಿಯನ್ನು ನುಡಿದರು. ರಾಜ್ಯಕ್ರೀಡಾ ಭಾರತಿಯ ಕಾರ್ಯಕಾರಿಣಿ ಸದಸ್ಯರಾದ ಭೋಜರಾಜ ಕಲ್ಲಡ್ಕ,ಜಿಲ್ಲಾ ಕ್ರೀಡಾಭಾರತಿ ಕೋಶಾಧಿಕಾರಿಗಳಾದ ಶ್ರೀ ಪ್ರೇಮನಾಥ್ ಉಳ್ಳಾಲ್,ಜೊತೆ ಕಾರ್ಯದರ್ಶಿ ಡಾ। ಕರುಣಾಕರ ಶೆಟ್ಟಿ,ಉಪಾಧ್ಯಕ್ಷರಾದ ಅನಂತ್ ಪ್ರಭು, ಎಸ್ ವಿ ಭಟ್, ಸದಾನಂದ ಪ್ರಭು, ಮಮತಾ ಅಣ್ಣಯ್ಯ ಕುಲಾಲ್, ಸುಜಾತಾ ಕೋಡಿಕಲ್, ಲೇಖನ, ಸಂಗೀತಾ ಉಪಸ್ಥಿತರಿದ್ದರು. ಜಯಶ್ರೀ ಪ್ರತಿಮ್ ವಂದಿಸಿದರು.




