ದಕ್ಷಿಣ ಕನ್ನಡ : ದೇಶದಾದ್ಯಂತ ಅಡಿಕೆ ಖರೀದಿ ಮತ್ತು ಮಾರಾಟ ಕೇಂದ್ರಗಳನ್ನ ಹೊಂದಿರುವ ಕ್ಯಾಂಪ್ಕೋ ಸಂಸ್ಥೆ,, 1973ರಲ್ಲಿ ಆರಂಭಗೊಂಡು ರೈತರಿಂದ ಅಡಿಕೆ ಖರೀದಿ ಮತ್ತು ಮಾರಾಟವನ್ನು ಹಾಗೂ ಇತರ ರೈತೋದ್ಪನ್ನಗಳನ್ನು ಖರೀದಿಸಿ ರೈತರಿಗೆ ನೆರವಾಗುವುದರ ಜೊತೆಗೆ ಮಾರುಕಟ್ಟೆ ಸ್ಥಿರದರ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಅಲ್ಲದೆ ಅಡಿಕೆ ಹಾಗೂ ಕರಿಮೆಣಸು ಕೊಳೆ ರೋಗದಿಂದ ರಕ್ಷಿಸಲು ರೈತರಿಗೆ ಬೇಕಾದ ಬೋರ್ಡು ದ್ರಾವಣ ತಯಾರಿಕೆಗೆ ಬೇಕಾದ ಮೂಲ ಸಾಮಗ್ರಿಗಳನ್ನು ದರ ಕಡಿತ ಮಾರಾಟದೊಂದಿಗೆ ನೀಡಿ ಸಹಕಾರಿಯಾಗಿರುವುದು, ಹಾಗೂ ಕೊಕ್ಕೋದಿಂದ ತಯಾರಾಗುವ ಚಾಕಲೇಟ್ ಹಾಗೂ ಸಿಹಿ ಉತ್ಪನ್ನಗಳನ್ನು ಉತ್ಪಾದಿಸಿ ಮಾರಾಟ ಮಾಡುವ ಮೂಲಕ ರೈತರಿಗೆ ಸಹಕಾರಿಯಾಗಿರುವುದು ನಮಗೆಲ್ಲ ತಿಳಿದೇ ಇದೆ.
ಪ್ರಸ್ತುತ ಕ್ಯಾಂಪ್ಕೋ ಸಂಸ್ಥೆಯು ರೈತರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಪ್ರಮುಖವಾಗಿದ್ದು ರೈತರ ಆರೋಗ್ಯನಿಧಿ ಎಂಬ ಕಾರ್ಯಕ್ರಮದಡಿ ಕ್ಯಾಮ್ಕೋದ ಚಿತ್ತ ರೈತರ ಆರೋಗ್ಯದತ್ತ ಯೋಜನೆ ಅಡಿಯಲ್ಲಿ ಮೂಡುಬಿದರೆ ಕ್ಯಾಂಪ್ಕೋ ಸದಸ್ಯರಾದ ಇಗ್ನೇಷಿಯಸ್ ಸೇರವೋ ಕಲ್ಲ ಮುನ್ಕೂರು ಇವರಿಗೆ ಆರೋಗ್ಯ ಸಂಬಂಧಿ ಆಂಜಿಯೋ ಪ್ಲಾಸ್ಟಿ ಚಿಕಿತ್ಸೆಗಾಗಿ ರೂಪಾಯಿ 50 ಸಾವಿರವನ್ನು ಸಂಸ್ಥೆಯು ಬೈಕಂಪಾಡಿ ವಲಯದ ಹಿರಿಯ ಅಧಿಕಾರಿಯದ ಚಂದ್ರ ಇವರ ಮುಖಾಂತರ ಇಗ್ನೇಶಿಯಸ್ ಸೆರಾವೋ ಇವರ ಮನೆಯಲ್ಲಿ ಮೂಡುಬಿದ್ರೆ ವಲಯ ಕ್ಯಾಮ್ಕೋ ಪ್ರಬಂಧಕರಾದ ಶ್ರೀನಿವಾಸ್ ಪಿ.ವಿ. ಮತ್ತಿತರರ ಉಪಸ್ಥಿತಿಯಲ್ಲಿ ಚೆಕ್ ಮುಖಾಂತರ ನೀಡಿದರು.
ನೆರೆಮನೆಯ ದನಗಳು ತನ್ನ ತೋಟಕ್ಕೆ ಬಂದು ಹಾನಿಗೊಳಿಸಿವೆ ಎಂಬ ಆಕ್ರೋಶದಿಂದ ಹಟ್ಟಿಯಲ್ಲಿ ಕಟ್ಟಿಹಾಕಿದ್ದ ದನಗಳಿಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿ…
ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಿತ ಮಾದಕ…
ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿ, ಇವರ…
ಖಾಸಗಿ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ಸ್ಕೂಲ್ ಬಸ್ಗಳು ಕಾನೂನು ಮತ್ತು ನಿಯಮಗಳನ್ನು ಪಾಲಿಸುತ್ತಿದೆಯಾ ಎಂಬ ಬಗ್ಗೆ…
ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿಯಿಂದ ಹಳೇ ಸೇತುವೆ ಕಡೆಗೆ ಸಾಗುವ ದಾರಿಯ…
ಹೆಬ್ರಿ ಸಮೀಪದ ಹೊಸೂರು ಎಂಬಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಹೆಬ್ರಿ ಪೊಲೀಸರು ಬಂಧಿಸಿದ್ದಾರೆ. ಜೂಜಾಟ ನಡೆಯುತ್ತಿರುವ…