ದಕ್ಷಿಣ ಕನ್ನಡ : ಕಳೆದ ಕೆಲವಾರು ವರ್ಷಗಳಿಂದ,ಹಲವು ಸದಸ್ಯರನ್ನು ಒಳಗೊಂಡ, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿರುವ, ಪದ್ಮಶ್ರೀ ಭಟ್ ಇವರ ಉಸ್ತುವಾರಿಯ, ಬಡ ಅನಾರೋಗ್ಯ ಪೀಡಿತರ ಸೇವೆಯು ಒಳಗೊಂಡಂತೆ ಸದಾ ಸಮಾಜ ಸೇವೆಯನ್ನು ಮಾಡುತ್ತಿರುವ ಕರಾವಳಿ ಕರ್ನಾಟಕದ ನಮ್ಮ ಹೆಮ್ಮೆಯ “ವಾಯ್ಸ್ ಆಫ್ ಆರಾಧನಾ- ಆರದಿರಲಿ ಬದುಕು” ತಂಡವು ಇದೀಗ ಫೆಬ್ರವರಿ 2024ರ ತಿಂಗಳ ಸಹಾಯ ಹಸ್ತವನ್ನು ಇಂದು ದ.ಕ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಗಾಂಧೀ ನಗರ ಕಡೆಪಲ್ಲಿಯಲ್ಲಿ ಬಾಡಿಗೆ ಮನೆಯಲ್ಲಿ ತಾಯಿ ಬಬಿತ ಜೊತೆ ಇಬ್ಬರು ಮಕ್ಕಳು ವಾಸವಾಗಿರುವ ಕಡುಬಡತನದ 12 ವರ್ಷದ ಸಿಂಚನಾ ಮಗು ನರಗಳ ಸಮಸ್ಯೆ ಬ್ರೈನ್ ಹಾಗು ಮೂತ್ರ ಕೋಶದ ಸಮಸ್ಯೆ ಯಿಂದ ಬಳಲುತ್ತಿದ್ದು ಅವರ ಕಷ್ಟ ಅರಿತು ತಂಡ ಸಿಂಚನಾ ಮಗುವಿನ ಚಿಕಿತ್ಸೆಗಾಗಿ ತನ್ನ ತಂಡದ ಸದಸ್ಯರಿಂದ ಸಂಗ್ರಹಿಸಲಾದ 35 ಸಾವಿರ ರೂಪಾಯಿ ಸಹಾಯ ಹಸ್ತ ವನ್ನು ಪ್ರೀತಿಪೂರ್ವಕವಾಗಿ ನೀಡಿದರು.
ಜನಸೇವೆಯೇ ಜನಾರ್ದನ ಸೇವೆ ಎಂಬ ತತ್ವದಡಿ ಅನಾರೋಗ್ಯ ಪೀಡಿತರಿಗೆ ಸಹಾಯಧನ, ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಅವಕಾಶ, ಸಾಂಸ್ಕೃತಿಕ ಸಂಭ್ರಮ, ಜಾನಪದ ಕಾರ್ಯಕ್ರಮಗಳು, ಸರ್ಕಾರಿ ಶಾಲೆಗೆ ಕೊಡುಗೆ ಯೋಜನೆ, ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಈ ತಂಡವು ಹಮ್ಮಿಕೊಂಡಿದ್ದು,
ಕರಾವಳಿ ಕರ್ನಾಟಕದ ಮನೆಮತಾಗಿರುವ ತಂಡ, ತನ್ನ ತಂಡದ ಸದಸ್ಯರ ಬಲದಿಂದ ಉತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಿದ್ದು, ಪದ್ಮಶ್ರೀ ಭಟ್ಟರ ಮಾರ್ಗದರ್ಶನದಲ್ಲಿ ಇನ್ನಷ್ಟು ಸಮಾಜ ಸೇವೆಯಲ್ಲಿ ಸಾಧಿಸಲಿ.
ಸಾರ್ವಜನಿಕ ನಾಗರಿಕರು ವಾಯ್ಸ್ ಆಫ್ ಆರಾಧನಾ ಆರಾಧನೆ ಬದುಕು ತಂಡವನ್ನು ಅಭಿನಂದಿಸಿದ್ದಾರೆ, ಶುಭಾಶಯವನ್ನು ಹೇಳಿದ್ದಾರೆ.
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…
ಕಡಬ ತಾಲೂಕು ಕೊಯಿಲ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕ ರಸ್ತೆಯುದ್ದಕ್ಕೂ ಉಂಟಾಗಿರುವ ಹೊಂಡಗಳಿಗೆ ಸ್ಥಳಿಯರು ಶ್ರಮ…
ರಾಷ್ಟ್ರೀಯ ಹೆದ್ದಾರಿಯ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದಲ್ಲಿ ಸರ್ವೀಸ್ ರಸ್ತೆ ಹೊಂಡಗುಂಡಿಗಳಿಂದ ತುಂಬಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು…
ಮಾದಕ ದ್ರವ್ಯ ಸಾಗಾಟ ಹಾಗೂ ಮಾರಾಟ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ಮಣಿಪಾಲ ಪೊಲೀಸ್ ಠಾಣೆ ವ್ಯಾಪ್ತಿಯ 80 ಬಡಗಬೆಟ್ಟು ಗ್ರಾಮದ…
ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ ಮರೋಳಿ ಹತ್ತಿರ ಜೂನ್ 11 ರಂದು ಅಕ್ರಮವಾಗಿ ಆನೆದಂತಗಳನ್ನು ಮಾರಾಟಕ್ಕೆ ಯತ್ನಿಸುತಿದ್ದವರನ್ನು ಬಂಧಿಸಲಾಗಿದೆ.…