ಮಂಗಳೂರಿನ ಕುಲಶೇಖರದಲ್ಲಿರುವ ‘ಸ್ವೀಟ್ ಸಿಂಫನಿ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್’ ಸಂಸ್ಥೆಯ ಪ್ರಕಾಶನದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಕನ್ನಡದ ಜನಪ್ರಿಯ ಹಾಡುಗಳನ್ನು ಪಾಶ್ಚಿಮಾತ್ಯ ನೊಟೇಶನ್ ಮೂಲಕ ವಯಲಿನ್, ಗಿಟಾರ್ ಮತ್ತು ಕೀಬೋರ್ಡ್ ನಲ್ಲಿ ನುಡಿಸುವುದಕ್ಕೆ ನೆರವಾಗುವ ಸಂಪುಟ 2′ ರ ನೂತನ ಕೃತಿ ಕಳೆದ ವಾರ ಮಂಗಳೂರಿನಲ್ಲಿ ಲೋಕಾರ್ಪಣಗೊಂಡಿತು.
ಉದ್ಯಮಿ, ಸಮಾಜಸೇವಕಿ, ಮಾನವ ಹಕ್ಕುಗಳ ಹೋರಾಟಗಾರ್ತಿ ಶ್ರೀಮತಿ ಬೆನೆಟ್ ನವಿತಾ ಕ್ರಾಸ್ತ ಅವರು ಕೃತಿ ಬಿಡುಗಡೆಗೊಳಿಸಿ ಮಾತನಾಡಿ, “ಸಂಗೀತ ಶಿಕ್ಷಕ ಹಾಗು ರಂಗ ಕಲಾವಿದ ವಿಜಯ್ ನೊರೊನ್ಹ ಅವರ ಹಲವು ದಶಕಗಳ ಅಧ್ಯಾಪನದ ಅನುಭವ ಮತ್ತು ವಾದನರಂಗದ ಪರಿಶ್ರಮ ಪಾಂಡಿತ್ಯಗಳು ಈ ಕೃತಿಯ ಪ್ರತಿ ಪುಟವನ್ನೂ ಸಮೃದ್ಧಗೊಳಿಸಿವೆ; ಸಂಗೀತ ಕಲಿಕಾರ್ಥಿಗಳ ಕೈಬೆರಳು ಹಿಡಿದು ಮುನ್ನಡೆಸುವ ಸ್ಪಷ್ಟ ಸೂಚನೆಗಳು ಮತ್ತು ಉತ್ತಮ ಮಾರ್ಗದರ್ಶನ ವನ್ನು ಕೃತಿಯು ಒದಗಿಸುತ್ತದೆ” ಎಂದು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಸಂಗೀತಗಾರ ಹಾಗೂ ಶಾಲೋಮ್ ರೆಕಾರ್ಡಿಂಗ್ ಸ್ಟುಡಿಯೋ ಮಾಲಿಕರಾದ ಡಿಜೆ ರಾಕೇಶ್ ಜೋಸೆಫ್ ಡಿಸೋಜ ಅವರು ” ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರೂ ಉತ್ತಮ ಸಂಗೀತಗಾರರೂ ಆಗಿರುವ ಕೃತಿಕಾರ ವಿಜಯ್ ನೊರೊನ್ಹ ಅವರು ಎಲ್ಲ ಹಂತದ ಸಂಗೀತಾರ್ಥಿಗಳು ತಮ್ಮ ಮೆಚ್ಚಿನ ರಾಗಗಳಲ್ಲಿ ಪ್ರಭುತ್ವ ಸಾಧಿಸಲು ಅವಶ್ಯವಿರುವ ಕೌಶಲ್ಯ ಮತ್ತು ತಂತ್ರಗಳನ್ನು ಈ ಕೃತಿಯಲ್ಲಿ ವಿನ್ಯಾಸಗೊಳಿಸಿದ್ದಾರೆ. ಸಾರ್ವಕಾಲಿಕ ಜನಪ್ರಿಯತೆಯ ಮಧುರ ಗೀತೆಗಳಿಂದ ಸಮಕಾಲೀನ ಸೂಪರ್ ಹಿಟ್ ಗೀತೆಗಳವರೆಗೆ, ಬೇರೆ ಬೇರೆ ತಲೆಮಾರಿನ, ಬೇರೆ ಬೇರೆ ಭಾಷೆಯ ವೈವಿಧ್ಯಮಯ ಹಾಡುಗಳ ಪಾಶ್ಚಿಮಾತ್ಯ ನೊಟೇಶನ್ ಗಳನ್ನು ಒದಗಿಸುವ ಮೂಲಕ ಉದಯೋನ್ಮುಖ ಸಂಗೀತಗಾರರಿಗೆ ಈ ಕ್ರತಿಯು ಬಹು ಉಪಯುಕ್ತವಾಗಿದೆ” ಎಂದರು.
ಶ್ರೀ ಜಯರಾಜ್ ರೇಗೊ ಅತಿಥಿಗಳನ್ನು ಸ್ವಾಗತಿಸಿ, ಕೃತಿಯನ್ನು ಪರಿಚಯಿಸಿದರು.
ಸ್ವೀಟ್ ಸಿಂಫನಿ ಸಂಸ್ಥೆಯ ಮಾಲಕರಾದ ವಿಜಯ್ ನೊರೊನ್ಹರವರು ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…