ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.
ದ.ಕ.ಜಿಲ್ಲೆಯ ಶ್ರೀರಾಮ ಯಜ್ಞ ಯಕ್ಷ ಅಭಿಯಾನ ತಂಡದಿಂದ ಸೇವೆಯ ರೂಪದಲ್ಲಿ ಪ್ರದರ್ಶನಗೊಂಡಿರುವುದು ಕರ್ನಾಟಕ ರಾಜ್ಯಕ್ಕೆ ಹಿರಿಮೆಯನ್ನು ತಂದಿದೆ. ಆಯೋಧ್ಯೆ ಯಕ್ಷ ಯಾತ್ರೆಯ ಪ್ರಯುಕ್ತವಾಗಿ ತಂಡದ ಅಧ್ಯಕ್ಷ ಡಿ.ಮನೋಹರ ಕುಮಾರ್ ನೇತ್ರತ್ವದಲ್ಲಿ ಆಯೋಧ್ಯೆ ಟ್ರಸ್ಟಿಯಾಗಿರುವ ಗೋಪಾಲ ಜೀ ಅವರ ಸಹಕಾರದಿಂದ ಪ್ರಥಮ ಬಾರಿಗೆ ಆಯೋಧ್ಯೆಯಲ್ಲಿ “ಶ್ರೀ ರಾಮ ಚರಿತ” ಎಂಬ ಯಕ್ಷಗಾನದ ಪ್ರದರ್ಶನಗೊಂಡಿದ್ದಲ್ಲದೆ ಆಯೋಧ್ಯೆಯ ಜನತೆಗೆ ಯಕ್ಷಗಾನದ ಅಭಿರುಚಿಯ ಪರಿಚಯ ಮಾಡಿದ್ದಾರೆ ಎಂಬ ಹೆಗ್ಗಳಿಕೆ ಇವರದು. ಆಯೋಧ್ಯೆ ಯಕ್ಷ ಯಾತ್ರೆಯ ಸದುದ್ದೇಶದಿಂದ ಇಡೀ ತಂಡ ಅವಿಭಜಿತ ದ.ಕ.ಜಿಲ್ಲೆಯ 14 ಕಡೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಯಕ್ಷಾಭಿಮಾನಿಗಳ ಸಹಕಾರದೊಂದಿಗೆ “ಶ್ರೀರಾಮನ ಚರಿತ್ರೆಯ” ಯಕ್ಷಗಾನದ ಪ್ರದರ್ಶನವನ್ನು ಮಾಡಿದ್ದು. 15 ನೇ ಯಕ್ಷಗಾನ ಸೇವೆಯಾಟ ಆಯೋಧ್ಯೆ ಶ್ರೀರಾಮನ ಪುಣ್ಯ ಭೂಮಿಯಲ್ಲಿ ಪ್ರದರ್ಶನವಾಗಿದೆ.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…