ಉಡುಪಿ: ನೀಲಾವರ ಗೋಶಾಲೆಯ ಸಾವಿರಾರು ಗೋವುಗಳಿಗೆ ಯುವಕರ ತಂಡವೊಂದು 3 ಸಾವಿರ ಕೆಜಿ ಕಲ್ಲಂಗಡಿ ತಿನ್ನಿಸಿ ಖುಷಿ ಪಟ್ಟಿದೆ.
ಬಿಸಿಲ ಧಗೆ ಪ್ರತಿದಿನ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹಸುಗಳು ಸಹಜವಾಗಿಯೇ ಸಂಕಟ ಪಡುತ್ತವೆ. ಹಾಗಾಗಿ ಉಡುಪಿಯ ರಘುನಂದನ್ ಹೆಬ್ಬಾರ್ ನೇತೃತ್ವದ ಯುಗಾದಿ ಗೋಪಾರ್ಟಿ ತಂಡದವರು, ಕಲ್ಲಂಗಡಿ ತಿನ್ನಿಸುವ ಮಹತ್ವದ ನಿರ್ಧಾರ ಕೈಗೊಂಡರು. ಕಾರ್ಯಕರ್ತರಲ್ಲಾ ಸೇರಿ ಗೋ ಶಾಲೆಗೆ ಭೇಟಿ ಕೊಟ್ಟು ಕಲ್ಲಂಗಡಿಯನ್ನು ತುಂಡು ಮಾಡಿ ತಾವೇ ಸ್ವತಃ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು.
ಈ ತಂಡ ಗೋ ಸೇವೆಯಲ್ಲಿ ನಿರತವಾಗಿದ್ದು ಪ್ರತಿ ವರ್ಷ ವಿವಿಧ ಗೋಶಾಲೆಗಳಿಗೆ ಭೇಟಿ ನೀಡಿ ಈ ರೀತಿ ಗೋಸೇವೆ ನಡೆಸುತ್ತಾ ಬಂದಿದೆ. ನೀಲಾವರ ಗೋಶಾಲೆಯು ಸೇರಿದಂತೆ ಕರಾವಳಿ ಪರಿಸರದ ಅನೇಕ ಗೋಶಾಲೆಗಳಲ್ಲಿ ಸೇವಾ ಕಾರ್ಯ ನಡೆಸಿದೆ. ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಪುಟ್ಟ ಭಾಗವನ್ನು ತಮ್ಮ ಊರಿನ ಗೋವುಗಳ ಸೇವೆಗೆ ಬಳಸಬೇಕು ಎಂಬುವುದು ಈ ತಂಡದ ಆಶಯವಾಗಿದೆ.
ಗ್ರಾಮ ಪಂಚಾಯತ್ ಸೇರಿದಂತೆ ಸರ್ಕಾರದ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ ಅಳವಡಿಕೆ ಅನಿವಾರ್ಯವಾಗಲಿದೆ ಎಂದು ರಾಜ್ಯ…
ಬೆಂಗಳೂರಿನಲ್ಲಿ 'ಸೇಫ್ ಫುಟ್ಪಾತ್' ಅಭಿಯಾನಕ್ಕೆ ಭರ್ಜರಿ ಸ್ಪಂದನೆ ಸಿಕ್ಕಿದೆ. ಕಳೆದ ಒಂದು ತಿಂಗಳಲ್ಲಿ 750 ಕಿಲೋಮೀಟರ್ಗೂ ಹೆಚ್ಚು ಪಾದಚಾರಿ ಮಾರ್ಗಗಳ…
ಮಧ್ಯಪ್ರಾಚ್ಯದಲ್ಲಿ ಇರಾನ್ ಬಿಕ್ಕಟ್ಟು ದಿನೇದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕ ತನ್ನ ಯುದ್ಧ ತಂತ್ರಗಳನ್ನು ಮರುಪರಿಶೀಲಿಸಲು ಮುಂದಾಗಿದೆ. ಇರಾನ್ನ ಭೂಗತ ಬಂಕರ್ಗಳು…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…
ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…
ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…