ಜನ ಮನದ ನಾಡಿ ಮಿಡಿತ

Advertisement

ನೀಲಾವರ ಗೋಶಾಲೆಗೆ 3 ಸಾವಿರ ಕೆಜಿ ಕಲ್ಲಂಗಡಿ ಹಣ್ಣು ಸಮರ್ಪಿಸಿದ ಯುವಕರ ತಂಡ

ಉಡುಪಿ: ನೀಲಾವರ ಗೋಶಾಲೆಯ ಸಾವಿರಾರು ಗೋವುಗಳಿಗೆ ಯುವಕರ ತಂಡವೊಂದು 3 ಸಾವಿರ ಕೆಜಿ ಕಲ್ಲಂಗಡಿ ತಿನ್ನಿಸಿ ಖುಷಿ ಪಟ್ಟಿದೆ.

ಬಿಸಿಲ ಧಗೆ ಪ್ರತಿದಿನ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹಸುಗಳು ಸಹಜವಾಗಿಯೇ ಸಂಕಟ ಪಡುತ್ತವೆ. ಹಾಗಾಗಿ ಉಡುಪಿಯ ರಘುನಂದನ್ ಹೆಬ್ಬಾರ್ ನೇತೃತ್ವದ ಯುಗಾದಿ ಗೋಪಾರ್ಟಿ ತಂಡದವರು, ಕಲ್ಲಂಗಡಿ ತಿನ್ನಿಸುವ ಮಹತ್ವದ ನಿರ್ಧಾರ ಕೈಗೊಂಡರು. ಕಾರ್ಯಕರ್ತರಲ್ಲಾ ಸೇರಿ ಗೋ ಶಾಲೆಗೆ ಭೇಟಿ ಕೊಟ್ಟು ಕಲ್ಲಂಗಡಿಯನ್ನು ತುಂಡು ಮಾಡಿ ತಾವೇ ಸ್ವತಃ ಗೋವುಗಳಿಗೆ ತಿನ್ನಿಸಿ ಸಂಭ್ರಮಿಸಿದರು.
ಈ ತಂಡ ಗೋ ಸೇವೆಯಲ್ಲಿ ನಿರತವಾಗಿದ್ದು ಪ್ರತಿ ವರ್ಷ ವಿವಿಧ ಗೋಶಾಲೆಗಳಿಗೆ ಭೇಟಿ ನೀಡಿ ಈ ರೀತಿ ಗೋಸೇವೆ ನಡೆಸುತ್ತಾ ಬಂದಿದೆ. ನೀಲಾವರ ಗೋಶಾಲೆಯು ಸೇರಿದಂತೆ ಕರಾವಳಿ ಪರಿಸರದ ಅನೇಕ ಗೋಶಾಲೆಗಳಲ್ಲಿ ಸೇವಾ ಕಾರ್ಯ ನಡೆಸಿದೆ. ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಪುಟ್ಟ ಭಾಗವನ್ನು ತಮ್ಮ ಊರಿನ ಗೋವುಗಳ ಸೇವೆಗೆ ಬಳಸಬೇಕು ಎಂಬುವುದು ಈ ತಂಡದ ಆಶಯವಾಗಿದೆ.

Leave a Reply

Your email address will not be published. Required fields are marked *

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

error: Content is protected !!