ಈ ಚಿಕ್ಕೋಡಿ DDPI ಆಫೀಸಿನಲ್ಲಿ ನಡೀತಿದೆ ಹಾಡಹಗಲೇ ಭ್ರಷ್ಟಾಚಾರ.
ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ, ಅಂದಂಗ ಪತ್ರಾಂಕಿತ ಸಹಾಯಕ ಅಂದ್ರೆ ಗೆಜೆಟೆಡ್ ಅಸಿಸ್ಟಂಟ್ ಟಿ. ಜಿ. ಮಂಜುನಾಥ್ ಸಾರ್ವಜನಿಕರ ಅಧಿಕಾರಿ ಅನ್ನೋದನ್ನ ಮರೆತು ತನ್ನಿಷ್ಟದಂತೆ ಆಫೀಸಿನಲ್ಲಿ, ಶಾಲಾ ಧಾಖಲಾತಿಯಲ್ಲಿ ಲೋಪ ವಿದೆ ಅಂತಾ ವಿದ್ಯಾರ್ಥಿಗಳ ಪಾಲಕರು ಬಂದ್ರೆ ಪಾಲಕರಿಗೆ ಹಣದ ಬೇಡಿಕೆ ಇಡುತ್ತಾನೆ ಈ ಭ್ರಷ್ಟ ಅಧಿಕಾರಿ ಮಂಜುನಾಥ .
ಹಣ ಯಾಕೆ ಪಡಿತಿದ್ದೀರಿ ಅಂತಾ ಕೇಳೋಕೆ ಹೋದ್ರೆ DDPI ಸೇರಿದಂತೆ ಸಮರ್ಥನೆ ಮಾಡಿಕೊಳ್ಳೊಕ್ಕೆ ಮುಂದಾಗುತ್ತಾರೆ ಮತ್ತು ಪ್ರಶ್ನೆ ಮಾಡಿದ್ರೆ, ಕೇಸ್ ಹಾಕ್ತಿನಿ ಪೊಲೀಸರನ್ನ ಕರಿಸ್ತೀನಿ ವಿಡಿಯೋ ಮಾಡುವ ಅಧಿಕಾರ ಇಲ್ಲಾ.. ಯಾರ್ ಕೊಟ್ಟಿದ್ದು ಅಧಿಕಾರ!… ವಿಡಿಯೋ ಡಿಲೀಟ್ ಮಾಡಿ ಎಂದು ಗುಂಡಾಗಿರಿ ಮಾಡೋದಕ್ಕೆ ಮುಂದಾಗುತ್ತಾರೆ.
ಆಫೀಸಿನಲ್ಲಿ ಒಂದು ಫೈಲ್ಗೆ 3ಸಾವಿರ ಕೊಟ್ರೆ ನಿಮ್ನ ಕೆಲಸಾ ಫಿಕ್ಸ್ ಅನ್ನುತ್ತಾನೆ ಈ ಭ್ರಷ್ಟ ಹರಾಮಿ ಅಧಿಕಾರಿ. ಮತ್ತೆ… ಎನ್ ಹೇಳ್ತಾನ್ ಅಂದ್ರೆ ಅವರಿಗೆ ಒಂದು ಸಾವಿರ ನನಗೊಂದು ಸಾವಿರ ಒಳಗೊಂದು ಸಾವಿರ. ಇಲ್ಲವಾದ್ರೆ ಎಷ್ಟು ದಿನಾ ಹೋಗುತ್ತೋ ಗೊತ್ತಿಲ್ಲ ಅನ್ನುತ್ತಾನೆ ಈ ಹೇಸಿಕೆ ಅಧಿಕಾರಿ. ಕಳ್ಳನಿಗೆ ಪಿಳ್ಳೆ ನೆವ ಅನ್ನುವ ಹಾಂಗ್.. ಇವನಿಗೆ ಹಣಬೇಕು ಅಷ್ಟೇ. ಬಡವರು ಸಾಲ-ಸುಲ ಮಾಡಿ ಆದ್ರೂ ಇವನಿಗೆ ಹಣ ಕೊಟ್ಟು ದಾಖಲೆ ತಿದ್ದುಪಡಿ ಮಾಡಬೇಕಿದೆ.
ಪಾಲಕರು ಪ್ರಶ್ನೆ ಮಾಡಿದರೆ ಅಧಿಕಾರಿಗಳು ಸೇರಿ, ಪಾಲಕರ ವಿಡಿಯೋ ಮಾಡಿ ಫೋಟೋ ತಗೆದು ಹೆದರಿಸಲು ಮುಂದಾಗುತ್ತಾರೆ.
ಒಟ್ಟಿನಲ್ಲಿ ಇಂತಹ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನುವುದೇ ನಮ್ಮ ಒತ್ತಾಯ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ದೇವಿ ಮೂಕಾಂಬಿಕಾ…
ಮಳೆಗಾಲ ಆರಂಭವಾಗುತ್ತಿದ್ದಂತೆ ಸೇತುವೆಯೊಂದು ಕುಸಿದು ಬಿದ್ದ ಪರಿಣಾಮ ಹಲವು ಗ್ರಾಮಗಳ ಸಂಪರ್ಕದ ಕೊಂಡಿ ಕಳಚಿ ಬಿದ್ದು, ಜನರು ದ್ವೀಪದಂತೆ, ಹಳ್ಳಿಯೊಳಗೆ…
ಜ್ವರದಿಂದ ಬಳಲುತ್ತಿದ್ದ ಬಾಲಕಿಯೊರ್ವಳು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಘಟನೆ ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಎಂಬಲ್ಲಿ ನಡೆದಿದೆ. ಅಲ್ಲಿಪಾದೆ ಅನೇಜ…
ಬಿಸಿರೋಡಿನ ಪ್ರಸಿದ್ದ ಕ್ಯಾಂಟೀನ್ ಒಂದರಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಸ್ವಲ್ಪದರಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ಬಿಸಿರೋಡಿನ ಮಿನಿ ವಿಧಾನ ಸೌಧದ…
ಬೇಕಲ ಕೋಟೆ ಸಮೀಪದ ಪಳ್ಳಿಕರೆ ಕಡಲತೀರದಲ್ಲಿ ಭಾನುವಾರ ಸಂಜೆ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸಮುದ್ರದಲ್ಲಿ ಕೊಚ್ಚಿಹೋಗಿದ್ದು, ಅವರಿಗಾಗಿ…
ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ ಹೊಡೆದ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ…