ಮುಲ್ಕಿ: ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಲೈಟ್ ಹೌಸ್ ಬಳಿ ಸ್ಕೂಟರ್ ಗೆ ಕಾರು ಡಿಕ್ಕಿಯಾಗಿ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಾಯಾಳು ಸ್ಕೂಟರ್ ಸವಾರನನ್ನು ಹೊಸ ಕಾಡು ನಿವಾಸಿ ಗೌರವ್ ಶೆಟ್ಟಿ (22) ಎಂದು ಗುರುತಿಸಲಾಗಿದೆ
ಹಳೆಯಂಗಡಿ ಕಡೆಯಿಂದ ಪಕ್ಷಿಕೆರೆ ಕಡೆಗೆ ಬರುತ್ತಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ . ಅಪಘಾತವನ್ನು ತಪ್ಪಿಸಲು ಸ್ಕೂಟರ್ ಸವಾರ ಗೌರವ್ ಶೆಟ್ಟಿ ಆದಷ್ಟು ಪ್ರಯತ್ನಿಸಿದ್ದು ಸಿನಿಮಿಯ ಮಾದರಿಯಲ್ಲಿ ಸ್ಕೂಟರ್ ಹಾಗೂ ಕಾರು ಚರಂಡಿಗೆ ಬಿದ್ದು ಆಕಾಶಕ್ಕೆ ಮುಖ ಮಾಡಿ ನಿಂತಿದೆ.
ಅಪಘಾತದಿಂದ ಎರಡು ವಾಹನಗಳಿಗೆ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.



