ಜನ ಮನದ ನಾಡಿ ಮಿಡಿತ

Advertisement

ಕಡಬ:ಯೋಜನೆಯ ಸಿಬ್ಬಂದಿಗಳು ಜೇಣು ನೋಣದಂತೆ ಕೆಲಸ ನಿರ್ವಹಿಸಬೇಕು: ಉಡುಪಿ ಪ್ರಾದೇಶಿಕ ನಿರ್ಧೇಶಕರು ದುಗ್ಗೇಗೌಡ ಅಭಿಪ್ರಾಯ…

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕಿನ ಸೇವಾಪ್ರತಿನಿಧಿಗಳ ಪ್ರಗತಿ ಪರಿಶೀಲನೆ ಹಾಗೂ ಅಭಿನಂದನಾ ಕಾರ್ಯಕ್ರಮವು ಕಡಬ ಯೋಜನಾಕಛೇರಿ ಸಭಾಂಗಣದಲ್ಲಿ ನಡೆಯಿತು..

ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ಕಛೇರಿಯ ಉಡುಪಿ ಪ್ರಾದೇಶೀಕ ನಿರ್ಧೇಶಕರು ದುಗ್ಗೇಗೌಡರವರು ಮಾತನಾಡಿ. ಪೂಜ್ಶ ವೀರೇಂದ್ರ ಹೆಗ್ಗಡೆಯವರ ಗ್ರಾಮಾಭಿವೃಧ್ಧಿ ಯೋಜನೆಯ ಕಾರ್ಯಕ್ರಮಗಳನ್ನು ಗ್ರಾಮಮಟ್ಟದಲ್ಲಿ ಅನುಷ್ಟಾನಗೊಳಿಸುವಲ್ಲಿ ಯೋಜನೆಯ ಕಾರ್ಯಕರ್ತರುಗಳು ಕಾರ್ಯಕ್ರಮಗಳನ್ನು ಪ್ರಾಮಾಣಿಕವಾಗಿ ಜೇನು ನೋಣದಂತೆ ಪ್ರತೀ ಕುಟುಂಬದ ಸದಸ್ಶರೊಂದಿಗೆ ಅವಿನಾಭಾವ ಸಂಭಂಧಗಳನ್ನು ಹೆಚ್ಚುಗೊಳಿಸಿ ದುರ್ಬಳರನ್ನು ಸಭಲರನ್ನಾಗಿಸಲು ಕೆಲಸ ನಿರ್ವಹಿಸಬೇಕು..ಸಾಧನೆಗೆ ಅಡೆತಡೆಗಳು ಬರುವುದು ಸಹಜ ಅದನ್ನು ಮುಂದಿನ ಸಾಧನೆಗೆ ದಾರಿ ದೀಪವಾಗಿಸಿಕೊಂಡಲ್ಲಿ ಸಾಧನೆಯೋಂದಿಗೆ ತಮ್ಮ ಹೆಸರು ಶಾಸ್ವತವಾಗಿ ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂದರು.
ತಾಲೂಕಿನಲ್ಲಿ 2023-24ನೇ ಸಾಲಿನ ಕಿೃಯಾಯೋಜನೆಯಲ್ಲಿ ಸಾಧನೆ ಮಾಡಿದ ಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ತಾಲೂಕಿನ ಆರು ವಲಯಗಳಲ್ಲಿ ಪ್ರಥಮ ಸ್ಥಾನವನ್ನು ನೆಲ್ಶಾಡಿ ವಲಯದ ಮೇಲ್ವೀಚಾರಕ ವಿಜೇಶ್ ಜೈನ್ ಹಾಗೂ ವಲಯದ ಸೇವಾಪ್ರತಿನಿಧಿಗಳು ಹಾಗೂ ದ್ವೀತೀಯ ಸ್ಥಾನವನ್ನು ಕಡಬ ವಲಯದ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಹಾಗೂ ಸೇವಾಪ್ರತಿನಿಧಿಗಳು ಪಡೆದುಕೊಂಡರು.
ತಾಲೂಕಿನ ಸೇವಾಪ್ರತಿನಿಧಿಗಳಲ್ಲಿ ಪ್ರಥಮ ಸ್ಥಾನವನ್ನು ಗೊಳಿತೊಟ್ಟು ವಲಯದ ಸೇವಾಪ್ರತಿನಿಧಿ ಜಯಶ್ರೀ ಹಾಗೂ ದ್ವೀತೀಯ ಸ್ಥಾನವನ್ನು ಕಡಬ ವಲಯದ ಸೇವಾಪ್ರತಿನಿಧಿ ಜಯಲಕ್ಷ್ಮೀಯವರು ಪಡೆದುಕೊಂಡರು..
ಶೌರ್ಯಘಟಕದ ನಿರ್ವಹಣೆಯಲ್ಲಿ ಪ್ರಥಮ ಸ್ಥಾನವನ್ನು ಕಡಬ ವಲಯದ ಸಂಯೋಜಕಿ ನಳಿನಿ ಹಾಗೂ ದ್ವೀತೀಯ ಸ್ಥಾನವನ್ನು ಆಲಂಕಾರು ವಲಯದ ಸಂಯೋಜಕಿ ಸವಿತಾ ರವರು ಪಡೆದುಕೊಂಡರು.
ಜಿಲ್ಲಾ ನಿರ್ಧೇಶಕರಾದ ಪ್ರವೀಣ್ ಕುಮಾರ್ ರವರು ಸಾಧನೆ ಮಾಡಿದ ತಾಲೂಕಿನ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಿದರು.
ಭಾರತೀಯ ವಿಮಾ ವಿಭಾಗದ ಜನರಲ್ ಮ್ಶಾನೇಜರ್ ದಿನೇಶ್ ಪ್ರಭುರವರು ವಿಮಾ ಪಾಲಿಸಿ ನೊಂದಾವಣೆಯಲ್ಲಿ ಸಾಧನೆ ಮಾಡಿದವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು.
ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ ಧನ್ಶವಾದ ನೀಡಿದರು.
ತಾಲೂಕು ಹಣಕಾಸು ಪ್ರಭಂದಕಿ ಸುಜಾತ ಹಾಗೂ ಆಡಳಿತ ಪ್ರಭಂದಕಿ ಚೈತ್ರ ಕಾರ್ಯಕ್ರಮ ಸಂಯೋಜಿಸಿದರು. ತಾಲೂಕಿನ ಮೇಲ್ವೀಚಾರಕ ಶ್ರೇಣಿ ಸಿಬ್ಬಂದಿಗಳು ಕಛೇರಿ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!