ಮಂಜೇಶ್ವರ: ಸಹಕಾರಿ ನೌಕರರೊಂದಿಗೆ ಕೇರಳ ಸರಕಾರ ತೋರಿಸುತ್ತಿರುವ ಅವಗಣನೆ ಕೊನೆಗೊಳಿಸಬೇಕು, ನೀಡಲು ಬಾಕಿ ಇರುವ ಡಿ.ಎ ತಕ್ಷಣ ನೀಡಬೇಕು, ಹುರಿಹಗ್ಗ, ಕೈಮಗ್ಗ, ಸಹಕಾರಿ ಸಂಘಗಳನ್ನು ಸಂರಕ್ಷಿಸಬೇಕು, ಕ್ಷೀರ ಸಂಘಗಳಲ್ಲಿ ಸೆಕ್ಷನ್ 80 ಪೂರ್ಣವಾಗಿ ಜಾರಿಗೊಳಿಸಬೇಕು, ಪಿಗ್ಮಿ ಸಂಗ್ರಾಹಕರನ್ನು ಖಾಯಂ ನೌಕರರಾಗಿ ಅಂಗೀಕರಿಸಬೇಕು, ನೀಡಲು ಬಾಕಿ ಇರುವ ಪೆನ್ಶನ್ ವಿತರಣಾ ಕಮಿಷನ್ ಹಿಂದಿನ ಒಪ್ಪಿಗೆ ಪ್ರಕಾರ ನೀಡಬೇಕು, ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಸೆಪ್ಟೆಂಬರ್ 14,15,16 ತಾರೀಕಿಗೆ ತಿರುವನಂತಪುರ ಸೆಕ್ರಟರಿಯೇಟ್ ಮುಂಭಾಗ ನಡೆಯಲಿರುವ 72 ಗಂಟೆಗಳ ಹೋರಾಟದ ಪೂರ್ವಭಾವಿಯಾಗಿ ಕೇರಳ ಕೋಓಪರೇಟಿವ್ ಎಂಪ್ಲಾಯಿಸ್ ಕೌನ್ಸಿಲ್(AITUC) ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಹೊಸಂಗಡಿಯಲ್ಲಿ ನಡೆದ ಸಮಾವೇಶವನ್ನು ಉದ್ಘಾಟಿಸಿ KCEC(AITUC)ರಾಜ್ಯಾಧ್ಯಕ್ಷರಾದ ಕಾಂ|| ವಿ.ಎಂ ಅನಿಲ್ ಮಾತನಾಡುತ್ತಿದ್ದರು. KCEC(AITUC)ಜಿಲ್ಲಾಧ್ಯಕ್ಷರಾದ ರಾಮಕೃಷ್ಣ ಕಡಂಬಾರ್ ಅಧ್ಯಕ್ಷತೆ ವಹಿಸಿದರು. KCEC(AITUC)ರಾಜ್ಯ ಕಾರ್ಯದರ್ಶಿ ಬಿ.ಸುಕುಮಾರನ್, ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿ.ವಿ ರಾಜನ್, ಜಿಲ್ಲಾ ಸಮಿತಿ ಸದಸ್ಯ ಬಿ.ವಿಜಯ ಕುಮಾರ್, ಜಯರಾಮ್ ಬಲ್ಲಂಗುಡೇಲ್, ರಾಜನ್ ನಾಯರ್, ಉಮೇಶ್ ಕುಂಜತ್ತೂರ್ ಪದವು, ಹರೀಶ್ ಕೆ.ಆರ್, ಗಂಗಾಧರ್ ಕೊಡ್ಡೆ, ಕೇಶವ ಬಾಯಿಕಟ್ಟೆ, ವಿಜಯನ್ ರಾವಣೇಶ್ವರಂ, ವಲ್ಸಲಾ ಕಾಞಂಗಾಡ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಿ.ಸುಕುಮಾರನ್ ಸ್ವಾಗತಿಸಿ, ಕೊನೆಯಲ್ಲಿ ಗಂಗಾಧರ ಕೊಡ್ಡೆ ವಂದಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…
ಪೊಲೀಸ್ ಇಲಾಖೆಯ ನಿಜವಾದ ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಮತ್ತು ಮಾನವೀಯತೆಯ ಅಪರೂಪದ ಉದಾಹರಣೆಯೊಂದು ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಡೆದ ಅಪಘಾತದ…
ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೂಡಬಿದರೆಯ ಮಿಜಾರು ಕೊಪ್ಪದಕುಮೇರಿಯಲ್ಲಿ ಸಂಜೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ…
ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ…
ಶುಕ್ರವಾರ ಸಂಜೆ ಬೀಸಿದ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿ ಮಾಣಿ ಬೊಳ್ಳುಕಲ್ಲಿನಿಂದ ಪೆರಾಜೆ ಶ್ರೀ ರಾಮಚಂದ್ರಾಪುರ ಮಠಕ್ಕೆ ಹೋಗುವ ಕಮಲ…