ದಕ್ಷಿಣ ಕನ್ನಡ :ಭತ್ತದ ಬೆಳೆಯಲ್ಲಿ ತೇನೆ ತಿಗಣೆ (ಬಂಬುಚಿ) ಕೀಟದ ನಿರ್ವಹಣೆ
ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಸುಮಾರು 200 ಕ್ಕೂ ಹೆಚ್ಚು ಕೀಟಗಳ ಬಾಧೆಗೆ ಒಳಗಾಗುತ್ತದೆ. ಇವುಗಳಲ್ಲಿ 20 ಕೀಟಗಳು ಭತ್ತದ ಬೆಳೆಯ ವಿವಿಧ ಹಂತದಲ್ಲಿ ಕಂಡು ಬಂದು ಇಳುವರಿಯೂ ಕಡಿಮೆಮಾಡಿ ಆರ್ಥಿಕ ಹಾನಿಯುಂಟು ಮಾಡುತ್ತವೆ. ಪ್ರಮುಖವಾಗಿ ಭತ್ತದ ತೆನೆ ಬಿಡುವ ಸಮಯ ಮತ್ತು ಕಾಳು ತುಂಬುವ ಸಮಯದಲ್ಲಿ ತೆನೆ ತಿಗಣೆ (ಬಾಂಬೂಚಿ) ಕೀಟದ ಹಾವಳಿ ಕಂಡು ಬರುತ್ತದೆ.
ಈ ಕೀಟದ ಮರಿ ಹಾಗೂ ಪ್ರೌಢ ಕೀಟಗಳು ಭತ್ತದ ತೇನೆಗಳಲ್ಲಿನ ಬೀಜಗಳ ರಸವನ್ನು ಹೀರುವುದರಿಂದ ಕಾಳುಗಳು ಜೊಳ್ಳಾಗುವುದಲ್ಲದೆ, ರಸ ಹಿರಿರುವ ಕಾಳುಗಳ ಜಾಗದಲ್ಲಿ ಕಪ್ಪು ಚುಕ್ಕೆ ಕಾಣುತ್ತವೆ, ಇದರಿಂದ ಭತ್ತದ ಇಳುವರಿ ಕಡಿಯಾಗುವದಲ್ಲದೆ ಭತ್ತದ ಮಾರುಕಟ್ಟೆ ಬೆಲೆಯು ಕಡಿಮೆಯಾಗಿ ರೈತರು ಆರ್ಥಿಕ ನಷ್ಠ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕೀಟದ ಸಮಗ್ರ ನಿರ್ವಹಣೆ ತುಂಬಾ ಅವಶ್ಯಕವೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ತಿಳಿಸಿದರು. ಈ ಕೀಟದ ಸಮಗ್ರ ನಿರ್ವಹಣೆಗಾಗಿ ರೈತರು ಭತ್ತದ ಗದ್ದೆಯಲ್ಲಿ ಮತ್ತು ಬದುಗಳಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು. ಹಾಗೆಯೇ 5 ಮಿಲಿ ಅಝಾಡಿರಚ್ಟಿನ್ 0.03 % (ಕಹಿ ಬೇವಿನ ಎಣ್ಣೆ) ಅಥವಾ 2 ಮಿಲಿ ಫಿಪ್ರೊನಿಲ್ 5% ಎಸ್ ಸಿ ಅಥವಾ 0.6 ಮಿಲಿ ಇಮೀಡಾಕ್ಲೋಪ್ರಿಡ್ 06% + ಲಾಂಬ್ಧಾ ಸೈಹಲೋತ್ರೀನ್ 04 % ಎಸ್ ಎಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.
ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲನೋರ್ವ ಕಾಣೆಯಾದ ಘಟನೆ ನಡೆದಿದ್ದು, ನೇತ್ರಾವತಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.…
ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಬೊಳ್ಳಾರಿ ನಿವಾಸಿ ಚೆನ್ನಕೇಶವ ಕಾಣೆಯಾದವರಾಗಿದ್ದು, ದೂರುದಾರರ ಪ್ರಕಾರ,…
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತಮ್ಮ ಕಚೇರಿಯಲ್ಲಿ ಬಂಟ್ವಾಳ ಪುರಸಭೆಯ ಸಮಗ್ರ ಕುಡಿಯುವ ನೀರಿನ ಯೋಜನೆಯ 2ನೇ…
ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯತಿಗೆ ಎಮ್.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಭೇಟಿ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ…
ಐವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಮೇಲ್ಸೇತುವೆಯ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಆಸ್ಪತ್ರೆಯಲ್ಲಿ…
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…