ಜನ ಮನದ ನಾಡಿ ಮಿಡಿತ

Advertisement

ಭತ್ತದ ಬೆಳೆನಿರ್ವಹಣೆ : ಕೃಷಿ ವಿಜ್ಞಾನಿ ಕೇದಾರನಾಥರಿಂದ ಮಾಹಿತಿ

ದಕ್ಷಿಣ ಕನ್ನಡ :ಭತ್ತದ ಬೆಳೆಯಲ್ಲಿ ತೇನೆ ತಿಗಣೆ (ಬಂಬುಚಿ) ಕೀಟದ ನಿರ್ವಹಣೆ

ಭತ್ತವು ಪ್ರಮುಖ ಆಹಾರ ಬೆಳೆಯಾಗಿದ್ದು, ಸುಮಾರು 200 ಕ್ಕೂ ಹೆಚ್ಚು ಕೀಟಗಳ ಬಾಧೆಗೆ ಒಳಗಾಗುತ್ತದೆ. ಇವುಗಳಲ್ಲಿ 20 ಕೀಟಗಳು ಭತ್ತದ ಬೆಳೆಯ ವಿವಿಧ ಹಂತದಲ್ಲಿ ಕಂಡು ಬಂದು ಇಳುವರಿಯೂ ಕಡಿಮೆಮಾಡಿ ಆರ್ಥಿಕ ಹಾನಿಯುಂಟು ಮಾಡುತ್ತವೆ. ಪ್ರಮುಖವಾಗಿ ಭತ್ತದ ತೆನೆ ಬಿಡುವ ಸಮಯ ಮತ್ತು ಕಾಳು ತುಂಬುವ ಸಮಯದಲ್ಲಿ ತೆನೆ ತಿಗಣೆ (ಬಾಂಬೂಚಿ) ಕೀಟದ ಹಾವಳಿ ಕಂಡು ಬರುತ್ತದೆ.

ಈ ಕೀಟದ ಮರಿ ಹಾಗೂ ಪ್ರೌಢ ಕೀಟಗಳು ಭತ್ತದ ತೇನೆಗಳಲ್ಲಿನ ಬೀಜಗಳ ರಸವನ್ನು ಹೀರುವುದರಿಂದ ಕಾಳುಗಳು ಜೊಳ್ಳಾಗುವುದಲ್ಲದೆ, ರಸ ಹಿರಿರುವ ಕಾಳುಗಳ ಜಾಗದಲ್ಲಿ ಕಪ್ಪು ಚುಕ್ಕೆ ಕಾಣುತ್ತವೆ, ಇದರಿಂದ ಭತ್ತದ ಇಳುವರಿ ಕಡಿಯಾಗುವದಲ್ಲದೆ ಭತ್ತದ ಮಾರುಕಟ್ಟೆ ಬೆಲೆಯು ಕಡಿಮೆಯಾಗಿ ರೈತರು ಆರ್ಥಿಕ ನಷ್ಠ ಅನುಭವಿಸಬೇಕಾಗುತ್ತದೆ. ಆದ್ದರಿಂದ ಈ ಕೀಟದ ಸಮಗ್ರ ನಿರ್ವಹಣೆ ತುಂಬಾ ಅವಶ್ಯಕವೆಂದು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿಗಳಾದ ಡಾ. ಕೇದಾರನಾಥ ರವರು ತಿಳಿಸಿದರು. ಈ ಕೀಟದ ಸಮಗ್ರ ನಿರ್ವಹಣೆಗಾಗಿ ರೈತರು ಭತ್ತದ ಗದ್ದೆಯಲ್ಲಿ ಮತ್ತು ಬದುಗಳಲ್ಲಿರುವ ಕಳೆಗಳನ್ನು ತೆಗೆದು ಸ್ವಚ್ಛತೆಯನ್ನು ಕಾಪಾಡಬೇಕು. ಹಾಗೆಯೇ 5 ಮಿಲಿ ಅಝಾಡಿರಚ್ಟಿನ್ 0.03 % (ಕಹಿ ಬೇವಿನ ಎಣ್ಣೆ) ಅಥವಾ 2 ಮಿಲಿ ಫಿಪ್ರೊನಿಲ್ 5% ಎಸ್ ಸಿ ಅಥವಾ 0.6 ಮಿಲಿ ಇಮೀಡಾಕ್ಲೋಪ್ರಿಡ್ 06% + ಲಾಂಬ್ಧಾ ಸೈಹಲೋತ್ರೀನ್ 04 % ಎಸ್ ಎಲ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!